ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಅರ್ಜಿದಾರ- ವಕೀಲ ಮತ್ತವರ ಅಡ್ವೊಕೇಟ್ ಆನ್ ರೆಕಾರ್ಡ್ (ಎಒಆರ್) ಒಬ್ಬರು ಶುಕ್ರವಾರ ಸುಪ್ರೀಂ ಕೋರ್ಟ್ನ ಕೋಪಕ್ಕೆ ತುತ್ತಾದ ಘಟನೆ ನಡೆದಿದೆ. ಕರ್ನಾಟಕ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಈ ಇಬ್ಬರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ (ಮೋಹನ್ ಚಂದ್ರ ಪಿ ತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ).
ಹೇಳಿಕೆಗೆ ಸಂಬಂಧಿಸಿದಂತೆ ಅರ್ಜಿದಾರರಾದ ಮೋಹನ್ ಚಂದ್ರ ಪಿ ಮತ್ತು ಎಒಆರ್ ವಿಪಿನ್ ಕುಮಾರ್ ಜೈ ಅವರ ಪ್ರತಿಕ್ರಿಯೆ ಕೇಳಿರುವ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಮುಂದಿನ ವಿಚಾರಣೆ ನಡೆಯುವ ಡಿಸೆಂಬರ್ 2 ರಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿರುವಂತೆ ಇಬ್ಬರಿಗೂ ಸೂಚಿಸಿತು.
ನಿಂದನಾತ್ಮಕ ಹೇಳಿಕೆಗೆ ಸಹಿ ಮಾಡುವ ವಕೀಲರು ಸಹ ನ್ಯಾಯಾಂಗ ನಿಂದನೆಗೊಳಪಡುತ್ತಾರೆ ಎಂದು 1955ರ ಎಂ ವೈ. ಶರೀಫ್ ಮತ್ತು ನಾಗಪುರ ಹೈಕೋರ್ಟ್ ಪೀಠ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ ಎಂದು ಹೇಳಿತು.
ರಾಜ್ಯದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಆಯ್ಕೆ ಪ್ರಶ್ನಿಸಿದ್ದ ಚಂದ್ರ ಅವರ ರಿಟ್ ಅರ್ಜಿಯನ್ನು ಈ ವರ್ಷದ ಆರಂಭದಲ್ಲಿ ಹೈಕೋರ್ಟ್’ನ ಏಕ-ಸದಸ್ಯ ಪೀಠ ವಜಾಗೊಳಿಸಿತ್ತು. ಸೆಪ್ಟೆಂಬರ್ನಲ್ಲಿ, ಹೈಕೋರ್ಟ್’ನ ವಿಭಾಗೀಯ ಪೀಠ ಕೂಡ ಚಂದ್ರ ಅವರ ಅತೃಪ್ತಿಯನ್ನು ಬೆಂಬಲಿಸುವಂತಹ ಯಾವುದೇ ಆಧಾರ ಇಲ ಎಂದು ತಿಳಿಸಿ ನ್ಯಾಯಾಲಯದ ಸಮಯ ವೆಚ್ಚ ಮಾಡಿದ್ದಕ್ಕಾಗಿ ₹ 5 ಲಕ್ಷ ದಂಡ ವಿಧಿಸಿತ್ತು. ಈ ತೀರ್ಪನ್ನು ಚಂದ್ರ ಅವರು ಎಒಆರ್ ವಿಪಿನ್ ಕುಮಾರ್ ಜೈ ಅವರ ಮೂಲಕ ಸುಪ್ರೀಂ ಕೋರ್ಟ್’ನಲ್ಲಿ ಪ್ರಶ್ನಿಸಿದ್ದರು.
“ಕೇವಲ ಪ್ರತಿವಾದಿಗಳ ಪರ ವಹಿಸಲು ಮತ್ತು ಅರ್ಜಿದಾರರನ್ನು ಶೋಷಿಸಿ ಪ್ರಚಾರ ಪಡೆಯಲು ಕರ್ನಾಟಕ ಹೈಕೋರ್ಟ್’ನ ವಿಭಾಗೀಯ ಪೀಠ ದುರುದ್ದೇಶದಿಂದ ದಂಡ ವಿಧಿಸಿದೆ” ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ “ಇಂತಹ ಅವಲೋಕನಗಳು ಕರ್ನಾಟಕ ಹೈಕೋರ್ಟ್ ಕಡೆಗೆ ಕೇವಲ ಅವಹೇಳನಕಾರಿ ಮಾತ್ರವೇ ಅಲ್ಲ ಬದಲಿಗೆ ತೀವ್ರ ನಿಂದನಾತ್ಮಕವಾಗಿವೆ ಕೂಡ” ಎಂದು ನ್ಯಾಯಾಲಯ ಹೇಳಿತು.