ಮನೆ ಸುದ್ದಿ ಜಾಲ ಚಾಮರಾಜನಗರ: ಕೃಷಿ ಹೊಂಡದಲ್ಲಿ ಬಿದ್ದು ಕೇರಳದ ಬಾಳೆಕಾಯಿ ವ್ಯಾಪಾರಿ ಸಾವು

ಚಾಮರಾಜನಗರ: ಕೃಷಿ ಹೊಂಡದಲ್ಲಿ ಬಿದ್ದು ಕೇರಳದ ಬಾಳೆಕಾಯಿ ವ್ಯಾಪಾರಿ ಸಾವು

0

ಚಾಮರಾಜನಗರ(Chamarajangara): ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಳೆ ಕಾಯಿ ಖರೀದಿಗೆ ಕೇರಳದಿಂದ ಆಗಮಿಸಿದ್ದ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಶನಿವಾರ ನಡೆದಿದೆ.

ಕೇರಳದ ವಯನಾಡು ಜಿಲ್ಲೆಯ ಅಂಬಲಕಾಡು ಮೂಲದ ಇಸ್ಮಾಯಿಲ್(42) ಮೃತ ವ್ಯಕ್ತಿ.

ಈತ ಬಾಳೆಕಾಯಿ ಖರೀದಿಗೆಂದು ಕೇರಳದಿಂದ ಬಂದಿದ್ದ ಎನ್ನಲಾಗುತ್ತಿದ್ದು, ಬಹಿರ್ದೆಸೆಗೆ ಹೋದ ವೇಳೆ ಹೊನ್ನೆಗೌಡನಹಳ್ಳಿ ಗ್ರಾಮದ ರಾಜಪ್ಪ ಎಂಬುವವರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ನಂತರ ಅಗ್ನಿ ಶಾಮಕ ದಳದ ಸಿಬಂದಿಯನ್ನು ಬರಮಾಡಿಕೊಂಡು ಶವವನ್ನು ಮೇಲೆತ್ತಿದ್ದಾರೆ.

ಹಿಂದಿನ ಲೇಖನಏಷ್ಯನ್ ಏರ್‌’ಗನ್ ಚಾಂಪಿಯನ್‌’ಷಿಪ್‌: ಮೆಹುಲಿ ಘೋಷ್ ಮತ್ತು ತಿಲೋತ್ತಮಾ ಸೇನ್’ಗೆ ಚಿನ್ನದ ಪದಕ
ಮುಂದಿನ ಲೇಖನಕರ್ನಾಟಕ ಹೈಕೋರ್ಟ್ ಅವಹೇಳನ: ಅರ್ಜಿದಾರರು ಮತ್ತು ಎಒಆರ್’ಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್