ಮನೆ ಅಪರಾಧ ಮನೆಯಲ್ಲಿ ಸಿಲಿಂಡರ್ ಸ್ಫೋಟ; ತಾಯಿ- ಮಗ ಪ್ರಾಣಾಪಾಯದಿಂದ ಪಾರು

ಮನೆಯಲ್ಲಿ ಸಿಲಿಂಡರ್ ಸ್ಫೋಟ; ತಾಯಿ- ಮಗ ಪ್ರಾಣಾಪಾಯದಿಂದ ಪಾರು

0

ತುಮಕೂರು(Tumkur) : ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮಗ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.

ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಿಂಗನಗಿರಿ ಗ್ರಾಮದವರಾದ ಶೋಭಾ ಅವರು ವಾಸಿಸುತ್ತಿದ್ದ ಕೆ.ಹೆಚ್.ಬಿ ಕಾಲೋನಿಯ ಮನೆಯಲ್ಲಿ ಸಿಲಿಂಡರ್​ ಸ್ಫೋಟಗೊಂಡಿದೆ.

ಎಂದಿನಂತೆ ಶೋಭ ಸಿಲಿಂಡರ್ ಆನ್ ಮಾಡಿ ಟೀ ಮಾಡುವ ವೇಳೆ ರೆಗ್ಯುಲೇಟರ್ ಕಳಚಿಕೊಂಡು, ಸಿಲಿಂಡರ್​ ಸ್ಫೋಟಗೊಂಡಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಲಿಂಡರ್ ಸ್ಫೋಟಕ್ಕೆ ಮನೆಯಲ್ಲಿದ್ದ ಟಿವಿ, ಪ್ರಿಡ್ಜ್​, ವಾಷಿಂಗ್​ ಮಷಿನ್ ಸೇರಿದಂತೆ ಲಕ್ಷಾಂತ ರೂಪಾಯಿ ಬೆಲೆ ಬಾಳುವ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮೈಸೂರು ಅರಮನೆ ರಕ್ಷಣಾ ಗೋಡೆ ಕುಸಿತ
ಮುಂದಿನ ಲೇಖನನಿಮಗೆ ಸೊಂಟ, ಭುಜ ನೋವು ಇದೆಯೇ ಹಾಗಾದ್ರೆ ಕರಿಬೇವಿನ ಎಲೆ ಸೇವಿಸಿ