ಮನೆ ರಾಷ್ಟ್ರೀಯ ಗಣರಾಜ್ಯೋತ್ಸವ ಶಿಬಿರಕ್ಕೆ ಮೈಸೂರಿನ ದಿಯಾ ಗಣೇಶ್ ಆಯ್ಕೆ

ಗಣರಾಜ್ಯೋತ್ಸವ ಶಿಬಿರಕ್ಕೆ ಮೈಸೂರಿನ ದಿಯಾ ಗಣೇಶ್ ಆಯ್ಕೆ

0

ಮೈಸೂರು(Mysuru): ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಶಿಬಿರ–2023ಕ್ಕೆ ಮೈಸೂರಿನ ಕುಮಾರಬೀಡು ಆರ್ಕಿಡ್ಸ್ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದಿಯಾ ಗಣೇಶ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಜೂನಿಯರ್ ವಿಭಾಗದಿಂದ ಆಯ್ಕೆಯಾದ ಏಕೈಕ ಕೆಡೆಟ್ ಇವರಾಗಿದ್ದಾರೆ. ಕಳೆದ ವರ್ಷ 14–ಕರ್ನಾಟಕ ಬೆಟಾಲಿಯನ್ ಅಡಿಯಲ್ಲಿ ಆರ್ಕಿಡ್ಸ್ ಪಬ್ಲಿಕ್ ಸ್ಕೂಲ್‌’ನಲ್ಲಿ ಎನ್‌’ಸಿಸಿ ಪ್ರಾರಂಭವಾಯಿತು. 50 ಕೆಡೆಟ್‌ಗಳಿಗೆ ಜೂನಿಯರ್ ವಿಭಾಗ (ಜೆಡಿ) ಜೂನಿಯರ್ ವಿಂಗ್ (ಜೆಡಬ್ಲ್ಯೂ)ನಲ್ಲಿ ತರಬೇತಿ ನೀಡಲಾಗುತ್ತಿದೆ. 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್‌’ಸಿಸಿಯನ್ನು ಪರಿಚಯಿಸಿದೆ.

ಸವಿ ಗಣೇಶ್–ಗಣೇಶ್ ಮಾದಪ್ಪ ದಂಪತಿಯ ಪುತ್ರಿಯಾದ ದಿಯಾ ಅಂತಿಮ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗುವ ಮುನ್ನ ಮೈಸೂರು ಮತ್ತು ಬೆಂಗಳೂರಿನಲ್ಲಿ 7 ವಿವಿಧ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.

ಅವರನ್ನು ಆರ್ಕಿಡ್ಸ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ಹಿಂದಿನ ಲೇಖನಮೈಸೂರು ಸಂಚಾರಿ ಪೊಲೀಸರಿಂದ ವಾಹನ ತಪಾಸಣೆ: ಬೈಕ್ ನಿಂದ ಬಿದ್ದು ವೃದ್ಧನಿಗೆ ಗಂಭೀರ ಗಾಯ
ಮುಂದಿನ ಲೇಖನಬೇವಿನ ಎಲೆಗಳಿಂದ ಇರುವ ಉಪಯೋಗ ಒಂದೆರಡಲ್ಲ!