ಮನೆ ರಾಜಕೀಯ ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡಲ್ಲ‌: ಸುಮಲತಾ ಅಂಬರೀಶ್

ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡಲ್ಲ‌: ಸುಮಲತಾ ಅಂಬರೀಶ್

0

ಮಂಡ್ಯ: ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡಲ್ಲ‌, ಅಭಿವೃದ್ಧಿಗಾಗಿ ಕೆಲಸ ಮಾಡ್ತೇ‌ನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಇಂದು ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಚುನಾವಣೆಗೆ ನಿಲ್ಲಬೇಕು ಎಂಬುದು ಅಷ್ಟು ಸುಲಭವಾದ ವಿಚಾರ ಅಲ್ಲ. ಅದೊಂದು ದೊಡ್ಡ ನಿರ್ಧಾರ ಆಗುತ್ತೆ. ಚುನಾವಣೆಗೆ ಎಷ್ಟು ದಿನ ಇದೆ ಅನ್ನೋದು ಮುಖ್ಯವಲ್ಲ. ಆದರೆ ಅನುಕೂಲಕರ ವಾತವರಣ ಎಷ್ಟಿದೆ ಎಂಬುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂಬುದನ್ನ ಹೇಳಲು ಇದು ಸಮಯವಲ್ಲ. ಸಮಯ ಬಂದಾಗ ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಮಾಡ್ತಿನಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಹಕಾರ ತುಂಬಿದೆ

ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಹಕಾರ ತುಂಬಿದೆ. ಸ್ಪೈ ಏಜೆಂಟ್ ಕೆಲಸ ಮಾಡುವುದನ್ನು ಕಡಿಮೆ ಮಾಡಿದರೆ ಚೆಂದ ಎಂದು ರವೀಂದ್ರ ಶ್ರೀಕಂಠಯ್ಯ ವಿರುದ್ಧ ಗುಡುಗಿದ ಸಂಸದೆ ಸುಮಲತಾ ಅಂಬರೀಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುಮಲತಾ ಜೊತೆ ಇದ್ದರೆ ಯಾರು ಉದ್ದಾರ ಆಗಲ್ಲ ಎಂಬ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಮದ್ದೂರಿನಲ್ಲಿಂದು ತಿರುಗೇಟು ನೀಡಿದ ಸುಮಲತಾ ಅಂಬರೀಶ್, ಅವರ ಬೆಂಬಲಿಗರೇ ಅವರನ್ನು ವಾಪಸ್ ಹೋಗಿ ಅಂದಿದ್ದಾರೆ. ಆ ವಿಡಿಯೋವನ್ನು ನೋಡಿದ್ದೇನೆ. ಅವರು ಪಾಪಾ ಅಷ್ಟು ಉದ್ದಾರ ಆಗಿದ್ದಕ್ಕೆ ವಾಪಸ್ಸು ಕಳ್ಸಿದ್ರೇನೋ ಎಂದು ವ್ಯಂಗ್ಯವಾಡಿದರು.

ನಾನು ದ್ರೋಹ ಮಾಡಿದ ಹಾಗೆ ಮಾತನಾಡುತ್ತಿದ್ದಾರೆ. ಮೈಯೆಲ್ಲಾ ದುರಂಹಕಾರ ತುಂಬಿದಾಗ ಬ್ರೈನ್ ವರ್ಕ್ ಆಗಲ್ಲ. ಏನು ಮಾತನಾಡ್ತಿದ್ದಿವಿ ಅನ್ನೋ ಅರಿವಿರಲ್ಲ. ದುರಂಹಕಾರದ ಮಾತುಗಳನ್ನು ಸಿರಿಯಸ್ ಹಾಗಿ ತೆಗೆದುಕೊಳ್ಳಲ್ಲ‌ ನಾನು ಎಂದು ಕಿಡಿಕಾರಿದರು.

ಕಾಂಗ್ರೆಸ್ ಜೊತೆ ಸಂಸದೆ ಸುಮಲತಾ ಸಂಪರ್ಕ ವಿಚಾರದ ಕುರಿತು ಮಾತನಾಡಿ, ಜೆಡಿಎಸ್ ಲೀಡರ್ಸ್’ಗಳಲ್ಲಿ ಅವರ ಕೆಲಸ ಬಿಟ್ಟು ಬೇರೆಯವರ ಚಿಂತೆ ಜಾಸ್ತಿ‌. ಯಾರ್ಯಾರು ಯಾರ ಜೊತೆ ಫೋನ್ ಸಂಪರ್ಕ ಮಾಡ್ತಿದ್ದಾರೆ. ಎಲ್ಲಿ ಯಾರನ್ನು  ಭೇಟಿ ಮಾಡ್ತಿದ್ದಾರೆ ಎಂದು ನೋಡುವುದೇ ಆಗಿದೆ. ಈ ಕೆಲಸ ಬಿಟ್ಟು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಹರಿಸಿದರೆ ಎಷ್ಟೊ ಅಭಿವೃದ್ಧಿ ಆಗುತ್ತಿತ್ತು ಎಂದು ತಿಳಿಸಿದರು.

ಹಿಂದಿನ ಲೇಖನಮಾ. 12 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಪ್ರತಾಪ್ ಸಿಂಹ
ಮುಂದಿನ ಲೇಖನಮಹದೇಶ್ವರ ಬೆಟ್ಟ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಜೆ.ಪಿ‌.ನಡ್ಡಾ ಚಾಲನೆ