ಮನೆ ರಾಜಕೀಯ “ಹುಲಿಯಾ ಕಾಡಿಗೆ, ಬಂಡೆ ಕ್ರಷರ್‌’ಗೆ, ಮುನಿಯಪ್ಪ ಪರಾರಿಯಾಗುತ್ತಾರೆ”: ನಳೀನ್ ಕುಮಾರ್ ಕಟೀಲ್

“ಹುಲಿಯಾ ಕಾಡಿಗೆ, ಬಂಡೆ ಕ್ರಷರ್‌’ಗೆ, ಮುನಿಯಪ್ಪ ಪರಾರಿಯಾಗುತ್ತಾರೆ”: ನಳೀನ್ ಕುಮಾರ್ ಕಟೀಲ್

0

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಳ್ಳ ಮುನಿಶಾಮಪ್ಪ ಅವರ ಪರ ಪಟ್ಟಣದ ಗಾಂಧಿಚೌಕದ ವೃತ್ತದಲ್ಲಿ ಅವರು ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿ, ಹುಲಿಯಾ ಕಾಡಿಗೆ, ಬಂಡೆ ಕ್ರಷರ್‌ಗೆ, ಡಾ. ಜಿ. ಪರಮೇಶ್ವರ್‌ ಓಡುತ್ತಾರೆ. ಕೆ.ಎಚ್‌ ಮುನಿಯಪ್ಪ ಅವರು ಪರಾರಿಯಾಗುತ್ತಾರೆ. ಪಿಳ್ಳ ಮುನಿಶಾಮಪ್ಪ ವಿಧಾನಸೌಧಕ್ಕೆ ಬರುತ್ತಾರೆ. ರಾಜ್ಯದಲ್ಲಿ ಬಹುಮತದ ಬಿಜೆಪಿ ಸರಕಾರ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಜಗತ್ತಿನಲ್ಲಿ ಪ್ರಜ್ವಲಿಸಲಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಪಕ್ಷವು ಮುನ್ನಡೆಯಲಿದೆ. ಡಬಲ್‌ ಎಂಜಿನ್‌ ಸರಕಾರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳು ಮಾಡಿದ್ದೇವೆ ಎಂದರು.

Join Our Whatsapp Group

ಸಾಕಷ್ಟು ಜನಪರ ಯೋಜನೆಗಳು ಯಡಿಯೂರಪ್ಪ ನೇತೃತ್ವದಲ್ಲಿ ಮತ್ತು ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸರಕಾರ ಮಾಡಿದೆ. ಬಜರಂಗದಳ ರಾಷ್ಟ್ರೀಯ ಸಂಘಟನೆ ಅದನ್ನು ರಾಜ್ಯದಲ್ಲಿ ನಿಷೇಧ ಮಾಡುವ ತಾಕತ್ತು ಕಾಂಗ್ರೆಸ್‌ಗೆ ಇಲ್ಲ. ಕಾಂಗ್ರೆಸ್‌, ಸುಳ್ಳು ಗ್ಯಾರಂಟಿ ಕಾರ್ಡ್‌ ಕೊಡುತ್ತಿದ್ದಾರೆ. ರಾಜಸ್ತಾನದಲ್ಲಿ ಅವರ ಸರಕಾರವಿದೆ. ಅಲ್ಲಿ ಹೇಳಿದ್ದನ್ನು ಮಾಡಲಿಲ್ಲ. ಬಿಜೆಪಿ ಹೇಳಿದ್ದನ್ನು ಮಾಡುತ್ತದೆ.

ನಮ್ಮ ಸರಕಾರ ಬಂದರೆ ಕ್ಷೇತ್ರದಲ್ಲಿ 10 ಸಾವಿರ ಹಕ್ಕು ಪತ್ರಗಳು ಕೊಡ್ತೇವೆ. ಪರಿಶಿಷ್ಟ ಸಮುದಾಯಕ್ಕೆ 75 ಯೂನಿಟ್‌ ಉಚಿತ ವಿದ್ಯುತ್‌ ಕೊಡುತ್ತಿದ್ದೇವೆ. ದೇವನಹಳ್ಳಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇವೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ, ಕ್ಷೇತ್ರಕ್ಕೆ 5 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಪಿಳ್ಳ ಮುನಿಶಾಮಪ್ಪ ಮಾತನಾಡಿ, 5 ವರ್ಷಗಳ ಕಾಲ ಶಾಸಕನಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದೇನೆ. ಒಂದೇ ಒಂದು ಅಟ್ರಾಸಿಟಿ ಕೇಸು ಹಾಕಿಸಲಿಲ್ಲ. ವಿಜಯಪುರ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿಜಯಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯಿದೆ. ಸರಕಾರ ಬಂದರೆ ಮೊದಲ ಕ್ಯಾಬಿನೆಟ್‌ ಸಭೆಯಲ್ಲೆ ಘೋಷಣೆ ಮಾಡಿಸಲಾಗುತ್ತದೆ. ಮೆಟ್ರೋ ಮತ್ತು ಕಾವೇರಿ ನೀರನ್ನು ದೇವನಹಳ್ಳಿಗೆ ತರಲಾಗುವುದು. 6 ತಿಂಗಳಿಗೊಮ್ಮೆ ಉದ್ಯೋಗ ಮೇಳ ಮಾಡುವ ಮೂಲಕ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಹಿಂದಿನ ಲೇಖನಚರಂಡಿ ನೀರಿನಲ್ಲಿ ನೋಟು ಹುಡುಕಿದ ಜನ
ಮುಂದಿನ ಲೇಖನಕಾರ್​ ಓಡಿದಷ್ಟೇ ಪ್ರೀಮಿಯಂ ಪಾವತಿಸಿ: Low Car Insurance ಗೊತ್ತಿದೆಯೇ ನಿಮಗೆ?