ಮನೆ ಸುದ್ದಿ ಜಾಲ ದಸರಾ: ಪಂಜಿನ ಕವಾಯತಿಗೆ ರಾಜ್ಯಪಾಲರು ಗೈರು ಹಾಜರು

ದಸರಾ: ಪಂಜಿನ ಕವಾಯತಿಗೆ ರಾಜ್ಯಪಾಲರು ಗೈರು ಹಾಜರು

0

ಮೈಸೂರು(Mysuru): ದಸರಾ ಮಹೋತ್ಸವದ ಅಂಗವಾಗಿ ಬನ್ನಿಮಂಟಪ ಮೈದಾನದಲ್ಲಿ ಇಂದು ಸಂಜೆ 7.30ಕ್ಕೆ ಆರಂಭಗೊಳ್ಳುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಗೈರು ಹಾಜರಾಗಲಿದ್ದಾರೆ.

ಕೋವಿಡ್–19 ಬಾಧಿತರಾಗಿರುವುದರಿಂದ ಅವರು ಪಾಲ್ಗೊಳ್ಳುತ್ತಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದಾರೆ.

ಪಂಜಿತ ಕವಾಯತು ವೇಳೆ ರಾಜ್ಯಪಾಲರು ಗೌರವವಂದನೆ ಭಾಗವಹಿಸಿ ಗೌರವ ವಂದನೆ ಸ್ವೀಕರಿಸುವುದು ವಾಡಿಕೆ. ಆದರೆ, ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅದನ್ನು ನಿರ್ವಹಿಸಲಿದ್ದಾರೆ.

ಅವರೊಂದಿಗೆ ಕೇಂದ್ರ ಸಚಿವರು, ರಾಜ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ.

ಹಿಂದಿನ ಲೇಖನಮೈಸೂರು ಅರಮನೆಗೆ ಆಗಮಿಸಿದ ಉತ್ಸವ ಮೂರ್ತಿಗೆ ಅದ್ದೂರಿ ಸ್ವಾಗತ
ಮುಂದಿನ ಲೇಖನರೈತಸಂಘದಿಂದ ಹೆದ್ದಾರಿ ಬಂದ್: ದಸರಾ ಪ್ರವಾಸಿಗರ ಪರದಾಟ