ಮನೆ ಅಪರಾಧ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ರೌಡಿ ಸಹೋದರರ ಬಂಧನ

ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ರೌಡಿ ಸಹೋದರರ ಬಂಧನ

0

ಬೆಂಗಳೂರು(Bengaluru): ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕುಖ್ಯಾತ ರೌಡಿಶೀಟರ್ ಸಹೋದರರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ ನಟೋರಿಯಸ್​​ಗಳಾಗಿ ಗುರುತಿಸಿಕೊಂಡಿರುವ ಸಂಜು ಹಾಗೂ ವೀರು ಬಂಧಿತ ಸಹೋದರರು.

ಕುಳ್ಳು ರಿಜ್ವಾನ್ ಸಹಚರರಾಗಿರುವ ಸಂಜು ಹಾಗೂ ವೀರು ಹದಿನೈದು ದಿನಗಳ‌ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಬಳಿಕ ಒಂದು ವಾರದ ಹಿಂದಷ್ಟೇ ಮುನೇಶ್ವರ ಬ್ಲಾಕ್ ಬಳಿ ವಿರೋಧಿ ಬಣದ ಮನೋಜ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿಗೆ 30 ವರ್ಷ ಶಿಕ್ಷೆ
ಮುಂದಿನ ಲೇಖನಐಫೋನ್ 13 ಬೆಲೆ ಕಡಿತಗೊಳಿಸಿದ ಅಮೆಜಾನ್ ಮತ್ತು ಫ್ಲಿಪ್’ಕಾರ್ಟ್!