ಮನೆ ಅಪರಾಧ ಕೌಟುಂಬಿಕ ಕಲಹ: ಅಳಿಯನನ್ನೇ ಕೊಂದ ಮಾವ

ಕೌಟುಂಬಿಕ ಕಲಹ: ಅಳಿಯನನ್ನೇ ಕೊಂದ ಮಾವ

0

ಚಾಮರಾಜನಗರ(Chamarajanagar): ಪತ್ನಿಯನ್ನು ಮನೆಗೆ ಕಳುಹಿಸಿ ಎಂದು ಕೇಳಿದ ಅಳಿಯನನ್ನೇ ಮಾವ ಕೊಲೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿಯಲ್ಲಿ  ನಡೆದಿದೆ.

ಜಾಗೇರಿ ಗ್ರಾಮದ ಆಂಥೋಣಿ(25) ಎಂಬಾತ ಮೃತ ದುರ್ದೈವಿ. ಹೆಣ್ಣು ಕೊಟ್ಟ ಮಾವ ಅಯ್ಯಾವೋ ಕೊಲೆ ಮಾಡಿರುವ ಆರೋಪಿ.

ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದರಿಂದ ಮಗಳು ಜಾನ್ಸಿಯನ್ನು ಅಯ್ಯಾವೋ ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.  ಕಳೆದ ರಾತ್ರಿ ಆಂತೋಣಿ ತನ್ನ ಹೆಂಡತಿಯನ್ನು ಮನೆಗೆ ಕಳುಹಿಸುವಂತೆ ಕೇಳಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಸಿಟ್ಟಿನ ಭರದಲ್ಲಿ ಕಲ್ಲಿನಿಂದ ಆಂಥೋನಿಗೆ ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಗೃಹ ಸಚಿವರ ಸ್ವಗ್ರಾಮದಲ್ಲಿ ದಲಿತ ದಂಪತಿ ಮೇಲೆ ಹಲ್ಲೆ: ಅತ್ಯಾಚಾರಕ್ಕೆ ಯತ್ನ
ಮುಂದಿನ ಲೇಖನಕೊರೊನಾ ಕಳೆಯಲಿ ಎಂದು ಮೈಸೂರಿನಿಂದ ಶಿರಡಿಗೆ ಭಕ್ತನ ಪಾದಯಾತ್ರೆ