ಮನೆ ಅಪರಾಧ ಗೃಹ ಸಚಿವರ ಸ್ವಗ್ರಾಮದಲ್ಲಿ ದಲಿತ ದಂಪತಿ ಮೇಲೆ ಹಲ್ಲೆ: ಅತ್ಯಾಚಾರಕ್ಕೆ ಯತ್ನ

ಗೃಹ ಸಚಿವರ ಸ್ವಗ್ರಾಮದಲ್ಲಿ ದಲಿತ ದಂಪತಿ ಮೇಲೆ ಹಲ್ಲೆ: ಅತ್ಯಾಚಾರಕ್ಕೆ ಯತ್ನ

0

ತೀರ್ಥಹಳ್ಳಿ(Theertha halli): ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಗ್ರಾಮದಲ್ಲೇ ದಲಿತ ದಂಪತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ದಂಪತಿ ಗ್ರಾಮಕ್ಕೆ ಮರಳುತ್ತಿದ್ದಾಗ ಮೂವರು ವ್ಯಕ್ತಿಗಳು ಅಡ್ಡಗಟ್ಟಿ ದುಷ್ಕೃತ್ಯ ಎಸಗಿದ್ದಾರೆ. 

ದೂರಿನಲ್ಲೇನಿದೆ..? : ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನ ಚಿಕಿತ್ಸೆಗಾಗಿ 26 ವರ್ಷದ ಮಹಿಳೆ ಸೋಮವಾರ ತೀರ್ಥಹಳ್ಳಿಗೆ ತೆರಳಿದ್ದರು. ಆದರೆ ವೈದ್ಯರು ಸಿಗದ ಕಾರಣ ಹಳೆಯ ಔಷದ ಚೀಟಿಯಲ್ಲಿದ್ದ ಔಷಧಗಳನ್ನು ತೆಗೆದುಕೊಂಡು ರಾತ್ರಿ 9 ಗಂಟೆ ಬಸ್ಸಿಗೆ ಗ್ರಾಮಕ್ಕೆ ಆಗಮಿಸಿದ್ದಾರೆ. ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಪತ್. ಆದರ್ಶ ಹಾಗೂ ಇನ್ನಿಬ್ಬರು ತಮ್ಮನ್ನು ತಡೆದು ಗಂಡನಿಗೆ ಥಳಿಸಿದರು.

ಇದರಿಂದ ನನ್ನ ಗಂಡ ಪ್ರಜ್ಞಾಹೀನರಾದರು. ನಂತರ ಆರೋಪಿಗಳು ನನ್ನನ್ನು ಎಳೆದೊಯ್ದು ಅತ್ಯಾಚಾರ ಮಾಡಲು ಮುಂದಾದರೂ. ಈ ವೇಳೆ ಸಹಾಯಕ್ಕಾಗಿ ಮಹಿಳೆ ಜೋರಾಗಿ ಕೂಗಿಕೊಂಡಿದ್ದು ಬಳಿಕ ಎಚ್ಚರಗೊಂಡ ಪತಿ ಸಹ ಕೂಗಿಕೊಂಡರು. ಇದರಿಂದ ಹೆದರಿದ ಅವರು ನನ್ನನ್ನು ಬಿಟ್ಟು ಓಡಿ ಹೋದರು. ಓಡಿ ಹೋಗುವ ಮುನ್ನ ಈ ವಿಚಾರವನ್ನು ಬಹಿರಂಗಪಡಿಸಿದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಮಹಿಳೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 323, 354ಎ, 354ಬಿ ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, 1989ರ ಸೆಕ್ಷನ್ 3 ರ ಅಡಿಯಲ್ಲಿ ದೌರ್ಜನ್ಯ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ.

ಹಿಂದಿನ ಲೇಖನಚೀನಾ ವಿಮಾನ ನಿಲ್ದಾಣದ ರನ್‌ ವೇಯಲ್ಲಿ ಹೊತ್ತಿ ಉರಿದ ವಿಮಾನ: ವಿಡಿಯೋ ವೈರಲ್
ಮುಂದಿನ ಲೇಖನಕೌಟುಂಬಿಕ ಕಲಹ: ಅಳಿಯನನ್ನೇ ಕೊಂದ ಮಾವ