ಮನೆ ಕಾನೂನು ಹಿನ್ನೋಟ 2023: 370 ನೇ ವಿಧಿ ರದ್ದು, ನೋಟು ಅಮಾನ್ಯೀಕರಣ ಸೇರಿ ಹಲವು ಮಹತ್ವದ ತೀರ್ಪು...

ಹಿನ್ನೋಟ 2023: 370 ನೇ ವಿಧಿ ರದ್ದು, ನೋಟು ಅಮಾನ್ಯೀಕರಣ ಸೇರಿ ಹಲವು ಮಹತ್ವದ ತೀರ್ಪು ನೀಡಿದ ದೇಶದ ಸರ್ವೋಚ್ಛ ನ್ಯಾಯಾಲಯ

0

ನವದೆಹಲಿ: 2023 ಸುಪ್ರೀಂ ಕೋರ್ಟ್ ಪಾಲಿಗೆ ಹಲವು ವೈಶಿಷ್ಟ್ಯಗಳ ವರ್ಷವಾಗಿದ್ದು, ಈ ವರ್ಷದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಹಲವು ದಾಖಲೆ ಮಾಡಿದ್ದು, ದಾಖಲಾದ ಪ್ರಕರಣಗಳಿಗಿಂತ ವಿಲೇವಾರಿಯೇ ಹೆಚ್ಚಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಅಡಿಯಲ್ಲಿ, ಜನವರಿ 1 ಮತ್ತು ಡಿಸೆಂಬರ್ 15, 2023 ರ ನಡುವೆ ಅಭೂತಪೂರ್ವ 52,191 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಉನ್ನತ ನ್ಯಾಯಾಲಯವು ದಾಖಲೆಯನ್ನು ಸೃಷ್ಟಿಸಿದೆ. ಈ ಅವಧಿಯಲ್ಲಿ 49,191 ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷ ಸುಮಾರು 40,000 ಪ್ರಕರಣಗಳನ್ನು ವಿಲೇವಾರಿ ಮಾಡಿತ್ತು.

ಪ್ರಮುಖ ಪ್ರಕರಣಗಳ ಪಟ್ಟಿ ಇಂತಿವೆ

  • ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿ
  • ನೋಟು ಅಮಾನ್ಯೀಕರಣದ ಕುರಿತ ಕೇಂದ್ರ ಸರ್ಕಾರದ ನಿರ್ಣಯವನ್ನು ಪ್ರಶ್ನಿಸಿ ದಾಖಲಿಸಲಾಗಿದ್ದ ಅರ್ಜಿ
  • ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸಲ್ಲಿಸಿದ್ದ ಅರ್ಜಿ
  • ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣದ ವಿಚಾರಕ್ಕೆ ಸಂಬಂಧಿಸಿದ ಅರ್ಜಿ
  • ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು (ಎಸ್‌ಸಿ) ಸರ್ವಾನುಮತದಿಂದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕವನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕರು, ಲೋಕಸಭೆ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಮಾಡುತ್ತಾರೆ ಎಂದು ತೀರ್ಪು ನೀಡಿತು.
  • ಜಾರಿ ನಿರ್ದೇಶನಾಲಯದ (ಇಡಿ) ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯ ಮೂರನೇ ವಿಸ್ತರಣೆಯು “ಅಕ್ರಮ” ಮತ್ತು 2021 ರಲ್ಲಿ ಅದರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
  • ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ನಡೆಸುವಂತೆ ಆದೇಶಿಸಿದೆ.
  • ಉದ್ಯಮಿ ಅಡಾನಿ ಸಮೂಹಕ್ಕೆ ಸಂಬಂಧಿಸಿದ ಹಿಂಡೆನ್‌ಬರ್ಗ್ ವರದಿ ಕುರಿತ ಮಹತ್ವದ ತೀರ್ಪು
  • ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ಮತ್ತು ಶಾಸಕರ ವಿರುದ್ಧ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಲ್ಲಿ ರಾಜ್ಯಪಾಲರು ಮತ್ತು ವಿಧಾನಸಭಾ ಸ್ಪೀಕರ್‌ಗಳ ವಿವೇಚನಾ ಅಧಿಕಾರಗಳು, ವಿಶೇಷವಾಗಿ ವಿರೋಧ ಪಕ್ಷದ ಆಡಳಿತವಿರುವ ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಕೇರಳ ಮತ್ತು ತೆಲಂಗಾಣಗಳಲ್ಲಿ ಸುಪ್ರೀಂ ಕೋರ್ಟ್‌ನ ಪರಿಶೀಲನೆಗೆ ಒಳಪಟ್ಟಿತು.
  • ಪಂಜಾಬ್ ಮತ್ತು ತಮಿಳುನಾಡು ರಾಜ್ಯಪಾಲರು ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು.
  • ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದಿಂದ ಸ್ಥಳಾಂತರಗೊಂಡ ಎಂಟು ಚಿರತೆಗಳ ಸಾವು ಸೇರಿದಂತೆ ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ವ್ಯವಹರಿಸಿದೆ.
  • ಐವರು ನ್ಯಾಯಾಧೀಶರ ಸಂವಿಧಾನ ಪೀಠವು ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲ್ಲಿಕಟ್ಟು, ಎತ್ತಿನ-ಗಾಡಿ ಓಟ, ಕಂಬಳ ಕ್ರೀಡೆಗಳನ್ನು ಮಾನ್ಯ ಮಾಡುವ ತಿದ್ದುಪಡಿ ಕಾಯಿದೆಗಳ ಸಿಂಧುತ್ವವನ್ನು ಎತ್ತಿಹಿಡಿದಿತ್ತು.
  • ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆಯ ತಿರಸ್ಕಾರ
ಹಿಂದಿನ ಲೇಖನಬೆಂಗಳೂರು: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಚಾಲಕ ಸಜೀವ ದಹನ
ಮುಂದಿನ ಲೇಖನPDO, FDA ಮತ್ತು SDA ನೇಮಕಾತಿ ಪರೀಕ್ಷೆಗಳಿಗೆ ಜ್ಞಾನಬುತ್ತಿಯಿಂದ 45 ದಿನಗಳ ಉಚಿತ ತರಬೇತಿ.