ಮನೆ ರಾಜ್ಯ ಅಧಿವೇಶನ ಮುಗಿದ ಬಳಿಕ ಶ್ರಮಕ್ಕೆ ಫಲ ಸಿಗುತ್ತೆ – ಇಕ್ಬಾಲ್‌ ಹುಸೇನ್‌

ಅಧಿವೇಶನ ಮುಗಿದ ಬಳಿಕ ಶ್ರಮಕ್ಕೆ ಫಲ ಸಿಗುತ್ತೆ – ಇಕ್ಬಾಲ್‌ ಹುಸೇನ್‌

0

ಬೆಳಗಾವಿ : ಪಕ್ಷಕ್ಕಾಗಿ ಡಿಕೆಶಿ ಪಟ್ಟ ಶ್ರಮಕ್ಕೆ ಫಲ ಸಿಗುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆಗಿಯೇ ಆಗುತ್ತದೆ ಎಂದು ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್ ಮತ್ತೆ ಡಿಸಿಎಂ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ನೆನ್ನೆ ರಾತ್ರಿ (ಗುರುವಾರ) ಡಿಕೆ ಶಿವಕುಮಾರ್‌ ತನ್ನ ಆಪ್ತ ಸಚಿವರು ಮತ್ತು ಶಾಸಕರ ಜೊತೆ ಡಿನ್ನರ್‌ ಸಭೆ ಮಾಡಿದ್ದರು. ಸಭೆಯ ಡಿಕೆಶಿ ಬೆಂಬಲಿಗರು ಮತ್ತೆ ಬಹಿರಂಗ ಹೇಳಿಕೆ ನೀಡಲು ಆರಂಭಿಸಿದ್ದಾರೆ.

ಇಕ್ಬಾಲ್‌ ಹುಸೇನ್‌ ಮಾತನಾಡಿ, ನಂಬರ್ ಮುಖ್ಯ ಅಲ್ಲ, ಹೈಕಮಾಂಡ್‌ನ ನಿರ್ದೇಶನ ಮುಖ್ಯ. 50-60 ಕಾಂಗ್ರೆಸ್‌ ಶಾಸಕರು ಡಿನ್ನರ್‌ಗಾಗಿ ಜೊತೆ ಸೇರಿದ್ದರು. ಶಿವಕುಮಾರ್‌ ಕರೆದರೆ 224 ಶಾಸಕರೂ ಊಟಕ್ಕೆ ಬರುತ್ತಾರೆ. ಎಲ್ಲರೂ ಡಿಕೆಶಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರಾಗಿದ್ದಾರೆ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಬೇಕು ಎಂದರು.

ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಬೆಳಗಾವಿ ಸ್ನೇಹಿತರು ಊಟಕ್ಕೆ ಕರೆದಿದ್ದರು ಹೋಗಿದ್ದೆವು. ಕುರ್ಚಿ ಕಿತ್ತಾಟವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾವುದೇ ನಂಬರ್ ಗೇಮ್ ಇಲ್ಲ. ಊಟಕ್ಕೆ ಸೇರುವುದು ತಪ್ಪೇ ಎಂದು ಪ್ರಶ್ನಿಸಿದರು.

ಯಶವಂತರಪುರ ಕ್ಷೇತ್ರದ ಬಿಜೆಪಿ ಶಾಸಕ ಸದ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಎಸ್‌ಟಿ ಸೋಮಶೇಖರ್‌, ಡಿಕೆ ಶಿವಕುಮಾರ್ ಯಾಕೆ ಸಿಎಂ ಆಗಬಾರದು..? ಪಕ್ಷ ಕಟ್ಟಿಲ್ವಾ..? ಶ್ರಮ ಪಟ್ಟಿಲ್ವಾ..? ಅದಕ್ಕೆ ಕೂಲಿ ಕೇಳುತ್ತಿದ್ದಾರೆ. ಅಧಿವೇಶನ ಮುಗಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಹೇಳಿದರು.