ಮನೆ ಅಪರಾಧ ಕುಡಿದ ಅಮಲಿನಲ್ಲಿ 12ನೇ ಪತ್ನಿಯನ್ನು ಕೊಂದ ಪತಿ

ಕುಡಿದ ಅಮಲಿನಲ್ಲಿ 12ನೇ ಪತ್ನಿಯನ್ನು ಕೊಂದ ಪತಿ

0

ಜಾರ್ಖಂಡ್: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ 12ನೇ ಪತ್ನಿಯನ್ನು ಹೊಡೆದು ಸಾಯಿಸಿರುವ ಘಟನೆ ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ತಾರಾಪುರ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ರಾಮಚಂದ್ರ ತುರಿ ಈ ಹಿಂದೆ 11 ಮಹಿಳೆಯನ್ನು ಮದುವೆಯಾಗಿದ್ದು, 12 ನೇ ಪತ್ನಿಯನ್ನಾಗಿ ಸಾವಿತ್ರಿ ದೇವಿ ಅವರನ್ನು ವರಿಸಿದ್ದ. ಈ ದಂಪತಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.

ಭಾನುವಾರ ( ಏ. 2 ರಂದು) ಕುಡಿದು ಮನೆಗೆ ಬಂದಿದ್ದ ರಾಮಚಂದ್ರ ತುರಿ ಪತ್ನಿ ಸಾವಿತ್ರಿಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಪತಿ ಕೋಲಿನಿಂದ ಹೊಡೆದು ಸಾಯಿಸಿದ್ದಾನೆ.

ಸೋಮವಾರ ಈ ಘಟನೆ ಬೆಳಕಿಗೆ ಬಂದಿದ್ದು, ಗವಾನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.

ಈತನ ದೈಹಿಕ ಹಿಂಸೆಯನ್ನು ತಾಳಲಾರದೇ ಅವರು ಆತನಿಂದ ದೂರವಾಗಿದ್ದಾರೆ ಎನ್ನಲಾಗಿದೆ.

ಹಿಂದಿನ ಲೇಖನಬೇಲೂರು: ವಿಜೃಂಭಣೆಯಿಂದ ಜರುಗಿದ ಚನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ
ಮುಂದಿನ ಲೇಖನಕೊಲೆ ಆರೋಪಿಯೊಂದಿಗೆ ಯುವತಿ ಪ್ರೀತಿ: ಮದುವೆಯಾಗಲು ಯುವಕನಿಗೆ 15 ದಿನಗಳ ಪೆರೋಲ್ ನೀಡಿದ ಹೈಕೋರ್ಟ್!