ಮೈಸೂರು: ಚಾಮುಂಡಿ ಬೆಟ್ಟಕ್ಕೆ ವೇಗ ಮಿತಿ ಅಳವಡಿಸುವುದು ಉತ್ತಮ ನಿರ್ಧಾರ. ಚಾಮುಂಡಿ ಬೆಟ್ಟಕ್ಕೆ ಸಂಪೂರ್ಣವಾಗಿ ಖಾಸಗಿ ವಾಹನ ನಿರ್ಬಂಧ ಮಾಡಿ ಎಂದು ಸರ್ಕಾರಕ್ಕೆ ಪಾರಂಪರಿಕ ತಜ್ಞ ಹಾಗೂ ಪರಿಸರವಾದಿ ಪ್ರೊ ರಂಗರಾಜು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಪ್ರೊ ರಂಗರಾಜು, ಚಾಮುಂಡಿ ಬೆಟ್ಟ ನೈಸರ್ಗಿಕ ಸಂಪನ್ಮೂಲಗಳ ಮೂಲ. ಇಲ್ಲಿ ಸಾಕಷ್ಟು ಪ್ರಾಣಿ ಸಂಕುಲ ಇದೆ. ಅವುಗಳ ರಕ್ಷಣೆ ತುಂಬಾ ಅಗತ್ಯ ಇದೆ. ಇದರ ಜೊತೆ ಚಾಮುಂಡಿ ಬೆಟ್ಟ ಇತರೆ ಬೆಟ್ಟಗಳ ರೀತಿ ಇಲ್ಲ. ಬೆಟ್ಟವು ಸಣ್ಣ ಕಲ್ಲು ಬಂಡೆ ಹಾಗೂ ಮೃದು ಮಣ್ಣಿನಿಂದ ನಿರ್ಮಾಣವಾಗಿದೆ. ಈ ಬೆಟ್ಟಕ್ಕೆ ಹೆಚ್ಚಿನ ಒತ್ತಡ ಸಹಿಸಿಕೊಳ್ಲುವ ಶಕ್ತಿ ಇಲ್ಲ. ಈಗಾಗಲೇ ಬೆಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಹೀಗಾಗಿ ಬೆಟ್ಟಕ್ಕೆ ಹೆಚ್ಚಿನ ಒತ್ತಡ ಉಂಟಾಗಿದೆ. ಚಾಮುಂಡಿ ಬೆಟ್ಟವನ್ನ ಧಾರ್ಮಿಕ ಕ್ಷೇತ್ರವನ್ನಾಗಿ ಬಿಡಿ. ಅದು ವ್ಯಾವಹಾರಿಕ ಕೇಂದ್ರವಾಗುವುದು ಬೇಡ ಎಂದು ಹೇಳಿದರು.
ವಾಹನಗಳ ಹಾಗೂ ವಾಣಿಜ್ಯ ವ್ಯವಹಾರಗಳಿಂದ ಒತ್ತಡ ಹೆಚ್ಚಾಗಿದ್ದು, ಹೀಗಾಗಿ ಬೆಟ್ಟಕ್ಕೆ ಸಂಪೂರ್ಣವಾಗಿ ಖಾಸಗಿ ವಾಹನ ನಿರ್ಬಂಧ ಮಾಡಿ. ಹಿಮವದ್ ಗೋಪಾಲಸ್ವಾಮಿ ದೇವಾಲಯದ ರೀತಿ ಸರ್ಕಾರಿ ಬಸ್ ಗಳನ್ನು ಮಾತ್ರ ಬಿಡಿ. ಈ ಮೂಲಕ ಚಾಮುಂಡಿ ಬೆಟ್ಟದ ರಕ್ಷಣೆ ಮಾಡಿ ಎಂದು ಪ್ರೊ. ರಂಗರಾಜು ಮನವಿ ಮಾಡಿದರು.
ಸುಳ್ಳು ಮಾಹಿತಿಯನ್ನ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ..
ಹನುಮ ಕೇಸರಿಯಾದ ಕಥೆ….
ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ಹಣಪತ್ತೆ…
ಕೆಂಪು ದಾಸವಾಳದ ಪ್ರಯೋಜನಗಳು…
ತೆರೆ ಮೇಲೆ ಬರಲಿದೆ ತಲೈವ ಜೀವನ…!
ಕಲ್ಯಾಣ್ ಜುವೆಲರ್ಸ್ ಅಂಗಡಿಯಲ್ಲಿAC ಬ್ಲಾಸ್ಟ್
ರಾಯ್ಬರೇಲಿಯಿಂದ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ…
ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ ಮಹಿಳೆಯರು..
ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.