ಮನೆ ರಾಜಕೀಯ ಜನರು ಸಂಕಷ್ಟದಲ್ಲಿರುವಾಗ ಸಿದ್ದರಾಮೋತ್ಸವ ಆಚರಣೆ ಬೇಕಿತ್ತಾ?: ಬಿಜೆಪಿ ವಕ್ತಾರ ರವಿ ಕುಮಾರ್ ಟೀಕೆ

ಜನರು ಸಂಕಷ್ಟದಲ್ಲಿರುವಾಗ ಸಿದ್ದರಾಮೋತ್ಸವ ಆಚರಣೆ ಬೇಕಿತ್ತಾ?: ಬಿಜೆಪಿ ವಕ್ತಾರ ರವಿ ಕುಮಾರ್ ಟೀಕೆ

0

ಬೆಂಗಳೂರು(Bengaluru): ರಾಜ್ಯದ ಜನರು ಸಂಕಷ್ಟದಲ್ಲಿರುವಾಗ ಕಾಂಗ್ರೆಸ್ ನವರಿಗೆ ಸಿದ್ದರಾಮೋತ್ಸವ ಆಚರಣೆ ಬೇಕಿತ್ತಾ? ಎಂದು ಬಿಜೆಪಿ ವಕ್ತಾರ ರವಿ ಕುಮಾರ್ ಪ್ರಶ್ನಿಸಿದ್ದಾರೆ.

ಸಿದ್ಧರಾಮಯ್ಯ ಅವರ 75ನೇ ವರ್ಷದ ಹುಟ್ಟಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ಧರಾಮೋತ್ಸವ ಕಾರ್ಯಕ್ರಮವನ್ನು ಟೀಕಿಸಿರುವ ಅವರು, ಮಳೆಯಿಂದಾಗಿ ಜನ ಸಂಕಷ್ಟದಲ್ಲಿದ್ದು, ಈ ಕಾರಣದಿಂದಾಗಿ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿತ್ತು. ಆದರೆ ಸಿದ್ಧರಾಮೋತ್ಸವವನ್ನು ಕಾಂಗ್ರೆಸ್ ನವರು ರದ್ದು ಮಾಡಲಿಲ್ಲ. ರಾಹುಲ್ ಗಾಂಧಿ ಅವರು ಕೂಡ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇದು ಬೇಕಿತ್ತಾ..? ಎಂದು ರವಿಕುಮಾರ್ ಕೇಳಿದ್ದಾರೆ.

ಸಿದ್ದರಾಮೋತ್ಸವದಿಂದ ಬಿಜೆಪಿಗೆ ಭಯ ಇಲ್ಲ. ಅದು ಕಾಂಗ್ರೆಸ್ ಉತ್ಸವ ಅಲ್ಲ ಸಿದ್ಧು ಉತ್ಸವ.  ಪಾರ್ಟಿ ಬಲಗೊಳಿಸಲು ಆಯೋಜಿಸಿರುವ ಕಾರ್ಯಕ್ರಮವಲ್ಲ.  ಡಿಕೆಶಿ, ಜಮೀರ್ ಹೀಗೆ ಅನೇಕರ ಉತ್ಸವ ಮಾಡಬಹುದು ಎಂದು ಹೇಳಿದ್ದಾರೆ.

ಹಿಂದಿನ ಲೇಖನಶ್ರವಣಬೆಳಗೊಳ ಬೆಟ್ಟದಲ್ಲಿ ತಡೆಗೋಡೆ ಕುಸಿತ
ಮುಂದಿನ ಲೇಖನಸಿದ್ಧರಾಮೋತ್ಸವ: ಮೂರು ಪುಸ್ತಕಗಳ ಬಿಡುಗಡೆ