ಮನೆ ಅಪರಾಧ ಕಾರ್ಕಳ: ಲಾರಿ ಚಾಲಕನ ಹತ್ಯೆ

ಕಾರ್ಕಳ: ಲಾರಿ ಚಾಲಕನ ಹತ್ಯೆ

0

ಕಾರ್ಕಳ: ಕುತ್ತಿಗೆಗೆ ಶಾಲ್ ಬಿಗಿದು ಆಯುಧವೊಂದರಿಂದ ಇರಿದು ಲಾರಿ ಚಾಲಕನನ್ನು ಕೊಲೆಗೈದ ಘಟನೆ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಕ್ಯಾಶ್ಯೂ ಫ್ಯಾಕ್ಟರಿ ಬಳಿ ನಡೆದಿದೆ.

ಮಣಿ ತಮಿಳುನಾಡು (36) ಕೊಲೆಯಾದ ವ್ಯಕ್ತಿ.

ಮುಡ್ರಾಲುನಲ್ಲಿರುವ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿ ವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು, ಅನ್ಲೋಡ್ ಮಾಡಿ ಹೋಗುತ್ತಿದ್ದರು. ಅದರಂತೆ ಜ.30 ರಂದು ಸಂಜೆ 4 ಗಂಟೆಗೆ ಗೇರು ಬೀಜದ ಲೋಡ್ ಇರುವ ಲಾರಿಗಳು ಬಂದಿದ್ದು, ಇನ್ನೆರಡು ಲಾರಿಗಳು ಸಂಜೆ 5.30 ಕ್ಕೆ ಬಂದಿದೆ.

ಸಂಜೆಯಾದ್ದರಿಂದ ಲಾರಿ ಅನ್ಲೋಡ್ ಆಗದೇ ಫ್ಯಾಕ್ಟರಿಯ ಬಳಿ ನಿಂತುಕೊಂಡಿತ್ತು. ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರು ಕೂಡಾ ಅಲ್ಲಿಯೇ ಇದ್ದು, ರಾತ್ರಿ 8.30 ಗಂಟೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರೋರ್ವರಿಗೆ ಲಾರಿ ನಿಲ್ಲಿಸಿದ ಸ್ಥಳದಿಂದ ಜೋರಾಗಿ ಗಲಾಟೆ ಕೇಳಿಸಿದೆ.

ಅಲ್ಲಿಗೆ ಹೋಗಿ ನೋಡಿದಾಗ ಲಾರಿ ಚಾಲಕ ಮಣಿ ಎಂಬಾತನ ಹತ್ಯೆಯಾಗಿರುವುದು ತಿಳಿದುಬಂದಿದೆ.

ಲಾರಿಯ ಇನ್ನೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು, ವೀರಬಾಹುವೇ ಈ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಬೆಂಗಳೂರು: ತೆರಿಗೆ ವಂಚನೆ ಆರೋಪ – ಚಿನ್ನಾಭರಣ ಮಳಿಗೆಗಳ ಮೇಲೆ ಐಟಿ ದಾಳಿ
ಮುಂದಿನ ಲೇಖನಅವಮಾನಿಸುವ ಉದ್ದೇಶವಿಲ್ಲದೇ ಜಾತಿ ಹೆಸರು ಬಳಕೆ ಎಸ್ಸಿ/ಎಸ್ಟಿ ಕಾಯಿದೆ ಅಡಿ ಅಪರಾಧವಲ್ಲ: ಹೈಕೋರ್ಟ್