ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ನಡೆಸಲು ಖಲಿಸ್ತಾನಿ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.
ದೆಹಲಿ ಚುನಾವಣೆ ವೇಳೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆಗಳು ದೊರೆತಿವೆ.
ಖಲಿಸ್ತಾನಿ ಭಯೋತ್ಪಾದಕರು ದೆಹಲಿಯ ವಾತಾವರಣವನ್ನು ಹಾಳು ಮಾಡಲು ನಾಯಕರ ಮೇಲೆ ದಾಳಿ ಮಾಡಬಹುದು ಎಂದು ಹೇಳಲಾಗಿದೆ. ಗುಪ್ತಚರ ಸಂಸ್ಥೆಗಳು ದೆಹಲಿ ಪೊಲೀಸರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿವೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಝಡ್ ಕೆಟಗರಿ ಭದ್ರತೆ ಸಿಕ್ಕಿದೆ.
ಇದರಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಸೇರಿದ್ದಾರೆ. ರ್ಯಾಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ನಾಯಕರ ಭದ್ರತೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಎಚ್ಚರಿಕೆಯಂತೆ ಕಾಲಕಾಲಕ್ಕೆ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 5 ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಮಂಗಳವಾರ 56 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೆ 85 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಜನವರಿ 13 ರಂದು 20 ನಾಮಪತ್ರಗಳು ಮತ್ತು ಜನವರಿ 10 ರಂದು 9 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮೇ 2019 ರಲ್ಲಿ, ಕೇಜ್ರಿವಾಲ್ ಸುಲ್ತಾನ್ಪುರಿಯಲ್ಲಿ ರೋಡ್ ಶೋ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅವರ ಕಾರಿನ ಮುಂದೆ ಬಂದು ಕಪಾಳಮೋಕ್ಷ ಮಾಡಿದ್ದರು.
ಈ ಹಿಂದೆ ನವೆಂಬರ್ 2018 ರಲ್ಲಿ, ಅನಿಲ್ ಶರ್ಮಾ ಎಂಬ ವ್ಯಕ್ತಿ ಅರವಿಂದ್ ಕೇಜ್ರಿವಾಲ್ ಮೇಲೆ ಮೆಣಸಿನ ಪುಡಿ ಎರಚಿದ್ದರು.
ನವೆಂಬರ್ 20, 2018 ರಂದು, ದೆಹಲಿ ಸೆಕ್ರೆಟರಿಯೇಟ್ನಲ್ಲಿ ಮಧ್ಯಾಹ್ನ 2.10 ರ ಸುಮಾರಿಗೆ ಅನಿಲ್ ಎಂಬ ವ್ಯಕ್ತಿ ಕೇಜ್ರಿವಾಲ್ ಮೇಲೆ ಮೆಣಸಿನ ಪುಡಿ ಎಸೆದರು.
ಏಪ್ರಿಲ್ 9, 2016 ರಂದು ವ್ಯಕ್ತಿಯೊಬ್ಬ ಕೇಜ್ರಿವಾಲ್ ಮೇಲೆ ಶೂ ಎಸೆದಿದ್ದರು, ಬೆಸ-ಸಮ ಯೋಜನೆಯಲ್ಲಿ ಸಿಎನ್ಜಿ ಸ್ಟಿಕ್ಕರ್ಗಳ ಮಾರಾಟದಲ್ಲಿನ ರಿಗ್ಗಿಂಗ್ ಬಗ್ಗೆ ಈ ವ್ಯಕ್ತಿಯು ಕೋಪಗೊಂಡಿದ್ದ.
2016ರ ಫೆಬ್ರವರಿಯಲ್ಲಿ ಪಂಜಾಬ್ನ ಲುಧಿಯಾನದಲ್ಲಿ ಕೇಜ್ರಿವಾಲ್ ಅವರ ಕಾರಿನ ಮೇಲೆ ಕೆಲವರು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಕೇಜ್ರಿವಾಲ್ ಅವರ ಕಾರಿನ ಮುಂಭಾಗದ ಗಾಜು ಒಡೆದಿತ್ತು.
ಜನವರಿ 2016 ರಲ್ಲಿ, ಆಮ್ ಆದ್ಮಿ ಸೇನಾ ಸದಸ್ಯೆ ಭಾವನಾ ಅರೋರಾ ಕೇಜ್ರಿವಾಲ್ ಮೇಲೆ ಮಸಿ ಎಸೆಸಿದ್ದರು
ಏಪ್ರಿಲ್ 4, 2014 ರಂದು ದೆಹಲಿಯ ಸುಲ್ತಾನ್ಪುರಿ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕ ಕೇಜ್ರಿವಾಲ್ಗೆ ಕಪಾಳಮೋಕ್ಷ ಮಾಡಿದ್ದ. ನಂತರ ಕೇಜ್ರಿವಾಲ್ ಕೂಡ ಆಟೋ ಚಾಲಕನ ಮನೆಗೆ ತೆರಳಿ ಅಲ್ಲಿ ಕ್ಷಮೆ ಯಾಚಿಸಿದ್ದರು.
ಘಟನೆಯ ಕೇವಲ 4 ದಿನಗಳ ನಂತರ, 8 ಏಪ್ರಿಲ್ 2014 ರಂದು, ದೆಹಲಿಯಲ್ಲಿ ರೋಡ್ ಶೋ ವೇಳೆ ವ್ಯಕ್ತಿಯೊಬ್ಬ ಅರವಿಂದ್ ಕೇಜ್ರಿವಾಲ್ಗೆ ಕಪಾಳಮೋಕ್ಷ ಮಾಡಲು ಪ್ರಯತ್ನಿಸಿದ್ದ.
2014ರ ಲೋಕಸಭೆ ಚುನಾವಣೆ ವೇಳೆ ವಾರಸಾನಿಯಲ್ಲಿ ಕೆಲವರು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಕೆಲ ನಾಯಕರ ಮೇಲೆ ಮೊಟ್ಟೆ ಮತ್ತು ಶಾಯಿ ಎಸೆದಿದ್ದರು.
2014ರ ಲೋಕಸಭೆ ಚುನಾವಣೆ ವೇಳೆ ಕೇಜ್ರಿವಾಲ್ ಗುಜರಾತ್ನಲ್ಲಿದ್ದರು. ಇಲ್ಲಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರಿನ ಗಾಜು ಒಡೆದಿತ್ತು.














