ಮನೆ ಸುದ್ದಿ ಜಾಲ ಕೊಳದ ಮಠದ ಡಾ. ಶ್ರೀ ಶ್ರೀ ಶ್ರೀ ಶಾಂತವೀರ  ಸ್ವಾಮೀಜಿ ಶಿವೈಕ್ಯ

ಕೊಳದ ಮಠದ ಡಾ. ಶ್ರೀ ಶ್ರೀ ಶ್ರೀ ಶಾಂತವೀರ  ಸ್ವಾಮೀಜಿ ಶಿವೈಕ್ಯ

0

ಬೆಂಗಳೂರು(Bengaluru): ಶ್ರೀ ಕೊಳದ ಮಠ ಮಹಾಸಂಸ್ಥಾನದ  ಪರಮಪೂಜ್ಯ ಶಿವಾನುಭವ ಚರಮೂರ್ತಿ,  ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಶ್ರೀ ಡಾ.ಶಾಂತವೀರ ಮಹಾಸ್ವಾಮೀಜಿಯವರು(Dr.Shri Shantaveera maha swamiji) ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಮಠದಲ್ಲಿ ಶಿವೈಕ್ಯರಾಗಿದ್ದಾರೆ.

ಬೆಂಗಳೂರಿನ ಶಾಂತಿನಗರದಲ್ಲಿರುವ ಮಠದಲ್ಲಿ ಇಂದು ಮುಂಜಾನೆ 4 ಗಂಟೆಗೆ ಶ್ರೀಗಳು ನಿಧನರಾಗಿದ್ದು, ಅಪಾರ ಭಕ್ತವೃಂದವನ್ನು ಅಗಲಿದ್ದಾರೆ. ಶ್ರೀಗಳ ಅಂತಿಮ ದರ್ಶನ ಪಡೆಯಲು  ಜನ ಸಮೂಹ ಮಠಕ್ಕೆ ಆಗಮಿಸುತ್ತಿದ್ದಾರೆ.

ಸಮಾಜದ ಹಿತಚಿಂತಕರಾಗಿದ್ದ ಶ್ರೀಗಳು ಅನೇಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೇ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಜಾಗವನ್ನು ಸರ್ಕಾರಕ್ಕೆ ದಾನ ನೀಡಿದ್ದಾರೆ. ಸಮಾಜದ ಹಿತಚಿಂತಕರಾಗಿದ್ದ ಶ್ರೀಗಳು ಅನೇಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೇ ಲಾಲ್ ಬಾಗ್ ಹಾಗೂ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಜಾಗವನ್ನು ದಾನ ನೀಡಿದ್ದಾರೆ. ಎಲ್ಲಾ ಸ್ವಾಮೀಜಿಗಳು ಸರ್ಕಾರದಿಂದ ಅನುದಾನ, ಆಸ್ತಿ ಪಡೆದುಕೊಂಡರೇ ಡಾ|| ಶಾಂತವೀರ ಮಹಾಸ್ವಾಮೀಜಿಯವರು ಯಾವುದೇ ಅನುದಾನ ನಿರೀಕ್ಷಿಸದೇ ತಮ್ಮ ಆಸ್ತಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಕ್ಕೆ ಹಿಂತಿರುಗಿಸಿರುವ ಗರಿಮೆ ಇವರದ್ದಾಗಿದೆ.

ಯಡಿಯೂರಪ್ಪ ಸಂತಾಪ: ಶಾಂತವೀರ ಸ್ವಾಮೀಜಿಗಳು ಶಿವೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಧರ್ಮಪ್ರಸಾರ, ಸಾಮಾಜಿಕ ಕಾಳಜಿ, ಜನ ಜಾಗೃತಿಗಳಲ್ಲಿ ನಿರತರಾಗಿದ್ದ ಶ್ರೀಗಳ ಅಗಲಿಕೆಯಿಂದ ಸಮಾಜ ಹಿರಿಯ ಗುರುಗಳನ್ನು ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಹಿಂದಿನ ಲೇಖನಪಟಿಯಾಲ ಉದ್ವಿಗ್ನ: ಮೂವರು ಪೊಲೀಸರ ಧಿಡೀರ್ ವರ್ಗಾವಣೆ
ಮುಂದಿನ ಲೇಖನಪಿಎಸ್​ಐ ನೇಮಕಾತಿ ಅಕ್ರಮ: ತಪ್ಪು ಮಾಡಿದವರಿಗೆ ಶಿಕ್ಷಯಾಗಲಿ ಎಂದ ಹೆಚ್ ಡಿಕೆ