ಮನೆ ರಾಜ್ಯ ಗದ್ದೆಗೆ ಉರುಳಿದ ಕೆಎಸ್‌ ಆರ್‌ ಟಿಸಿ ಬಸ್: ೪೦ಕ್ಕೂ ಹೆಚ್ಚು ಮಂದಿಗೆ ಗಾಯ

ಗದ್ದೆಗೆ ಉರುಳಿದ ಕೆಎಸ್‌ ಆರ್‌ ಟಿಸಿ ಬಸ್: ೪೦ಕ್ಕೂ ಹೆಚ್ಚು ಮಂದಿಗೆ ಗಾಯ

0

ಮೈಸೂರು : ಭತ್ತದ ಗದ್ದೆಗೆ ಕೆಎಸ್‌ಆರ್‌ಟಿಸಿ ಬಸ್ ಉರುಳಿ ಬಿದ್ದಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗೇಟ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

Join Our Whatsapp Group

ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿದೆ. ಬಸ್ ಬಿದ್ದ ರಭಸಕ್ಕೆ ಸೀಟುಗಳೆಲ್ಲ ಮುರಿದು ಒಂದರ ಮೇಲೊಂದು ಬಿದ್ದಿವೆ. ಚಾಲಕನ ಕೈ ಮುರಿದಿದ್ದು, ಕೆಲವು ಪ್ರಯಾಣಿಕರ ತಲೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.

ಗಾಯಾಳುಗಳಿಗೆ ಕೆ ಆರ್ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್‌ನಲ್ಲಿ ೭೦ ಪ್ರಯಾಣಿಕರಿದ್ದರು. ಗಾಯಗೊಂಡವರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಹಿಂದಿನ ಲೇಖನಡಾ.ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಂಚಿಕೆಯಲ್ಲಿ 800 ಕೋಟಿ ರೂ. ಹಗರಣ: ಎನ್​ ಆರ್​ ರಮೇಶ್ ಆರೋಪ
ಮುಂದಿನ ಲೇಖನಪತಿ ಹೂಡಿದ ವೈವಾಹಿಕ ದಾವೆ ವೆಚ್ಚಗಳನ್ನು ಆರಂಭದಲ್ಲಿಯೇ ನ್ಯಾಯಾಲಯಗಳು ಪತ್ನಿಗೆ ಕೊಡಿಸಬೇಕು: ಕಲ್ಕತ್ತಾ ಹೈಕೋರ್ಟ್