ಮನೆ ಸುದ್ದಿ ಜಾಲ ಕಂಪ್ಯೂಟರ್ ಶಿಕ್ಷಣ ಸದ್ಬಳಕೆ ಮಾಡಿಕೊಳ್ಳಿ: ಸರಸ್ವತಿ

ಕಂಪ್ಯೂಟರ್ ಶಿಕ್ಷಣ ಸದ್ಬಳಕೆ ಮಾಡಿಕೊಳ್ಳಿ: ಸರಸ್ವತಿ

0

ಮೈಸೂರು: ಪ್ರಸ್ತುತ ಕಂಪ್ಯೂಟರ್ ಶಿಕ್ಷಣ ತುಂಬಾ ಅವಶ್ಯವಾಗಿದ್ದು, ಇದನ್ನು ಸರ್ಕಾರಿ ಶಾಲೆಗಳಲ್ಲೂ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕಿ ಸರಸ್ವತಿ ತಿಳಿಸಿದರು.

ಇಲ್ಲಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌’ಎಲ್’ಎಚ್‌’ಪಿ)ಯಿಂದ ತಾಲ್ಲೂಕಿನ ಹಂಚ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಕಲ್ಪಿಸಿರುವ ‘ಮಕ್ಕಳ ಸ್ನೇಹಿ ಪೇಂಟಿಂಗ್ ಕಂಪ್ಯೂಟರ್ ಶಿಕ್ಷಣ ಹಾಗೂ ಸ್ಮಾರ್ಟ್ ಕ್ಲಾಸ್’ ಸೌಲಭ್ಯವನ್ನು ಗುರುವಾರ ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಯ ಮಕ್ಕಳಂತೆ ಕಲಿಯಬೇಕು. ಮಕ್ಕಳ ಸ್ನೇಹಿ ವಾತಾವರಣವನ್ನು ಅವರೂ ಅನುಭವಿಸಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಕ್ರಮ ವಹಿಸಿದೆ ಎಂದರು.

ಕಾರ್ಯದರ್ಶಿ ಆರ್‌’ಎಲ್’ಎಚ್‌’ಪಿ ಅಧ್ಯಕ್ಷ ಕೋಶಿ ಮ್ಯಾಥ್ಯೂ, ಪ್ರೊ.ಜೋಸ್ ವಿ.ಕೆ., ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಹಾದೇವ, ಕ್ಲುಬರ್ ಲುಬ್ರಿಕೇಶನ್‌ ನ ಕಾರ್ಯಕ್ರಮ ಅಧಿಕಾರಿ ಜಿತಿನ್, ಎಸ್‌’ಡಿಎಂಸಿ ಅಧ್ಯಕ್ಷೆ ಶ್ವೇತಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಮಾ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮರಿಯಮ್ಮ, ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಮತ್ತು ಪೋಷಕರು ಇದ್ದರು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಶರಣು ಮೃತ್ಯುಂಜಯ ಶರಣ್ಯ