ಮನೆ ಅಪರಾಧ ಮಂಡ್ಯ: ವಿದ್ಯುತ್ ಶಾಕ್ ಹೊಡೆದು ಇಬ್ಬರು ಛಾಯಾಗ್ರಾಹಕರು ಸಾವು

ಮಂಡ್ಯ: ವಿದ್ಯುತ್ ಶಾಕ್ ಹೊಡೆದು ಇಬ್ಬರು ಛಾಯಾಗ್ರಾಹಕರು ಸಾವು

0

ಮಂಡ್ಯ(Mandya): ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಸ್ವಚ್ಛಗೊಳಿಸುವ ವೇಳೆ ವಿದ್ಯುತ್ ಶಾಕ್​ನಿಂದಾಗಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಲಕ್ಷ್ಮೀ ಸ್ಟುಡಿಯೋ ಮಾಲೀಕ ಎಂ.ವಿವೇಕ್ ಮತ್ತು ಛಾಯಾಗ್ರಾಹಕ ಎಸ್.ಮಧುಸೂಧನ್ ಎಂದು ಗುರುತಿಸಲಾಗಿದೆ.

ದೀಪಾವಳಿ ಹಬ್ಬಕ್ಕೆಂದು ಸ್ಟುಡಿಯೋ ಶುಚಿಗೊಳಿಸುವ ಸಂದರ್ಭ ಬಿಲ್ಡಿಂಗ್ ಮೇಲಿನ ಬೋರ್ಡ್ ತೆರವುಗೊಳಿಸುವ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ 11ಕೆ.ವಿ. ವಿದ್ಯುತ್ ತಂತಿ ಮಧುಸೂಧನ್ ಅವರಿಗೆ ತಗುಲಿದೆ.

ಈ ಸಂದರ್ಭ ಮಧುಸೂದನ್​ ಅವರನ್ನು ರಕ್ಷಿಸಲು ಹೋದ ವಿವೇಕ್ ಕೂಡ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇಬ್ಬರ ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಬಿಪಿ-ಶುಗರ್ ಎರಡೂ ಕಂಟ್ರೋಲ್ ಮಾಡಲು ವಿಟಮಿನ್ ಸಿ ಹಣ್ಣು-ತರಕಾರಿಗಳನ್ನು ಸೇವಿಸಿ
ಮುಂದಿನ ಲೇಖನಡಾಲಿಯ ‘ಹೆಡ್ ಬುಷ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ