ಮನೆ ರಾಜ್ಯ ಮಂಗಳೂರು: ಹೊಳೆಗೆ ಉರುಳಿದ ಕಾರು; ಇಬ್ಬರು ನಾಪತ್ತೆ

ಮಂಗಳೂರು: ಹೊಳೆಗೆ ಉರುಳಿದ ಕಾರು; ಇಬ್ಬರು ನಾಪತ್ತೆ

0

ಮಂಗಳೂರು (Mangalore): ಮಾರುತಿ 800 ಕಾರು ದಕ್ಷಿಣ ಕನ್ನಡ ಜಿಲ್ಲೆಯ ಬೈತಡ್ಕ ಮಸೀದಿ ಬಳಿ ಹೊಳೆಗೆ ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕಾರು ವಿಟ್ಲ ಕುಂದಡ್ಕದ ಧನುಷ್ (26) ಅವರದ್ದು. ಅವರೇ ಕಾರನ್ನು ಚಲಾಯಿಸುತ್ತಿದ್ದರು. ಅವರ ಜೊತೆ ಅವರ ಹತ್ತಿರದ ಸಂಬಂಧಿಯಾಗಿರುವ ಮಂಜೇಶ್ವರದ ಧನುಷ್ ಅವರೂ ಪ್ರಯಾಣಿಸುತ್ತಿದ್ದರು. ಸದ್ಯಕ್ಕೆ ಇಬ್ಬರ ಸುಳಿವೂ ಸಿಕ್ಕಿಲ್ಲ.

ಅವರಿಗಾಗಿ ಹುಡುಕಾಟ ನಡೆಸಲು ಸವಣೂರಿನಿಂದ ನಾಲ್ವರು ಮುಳುಗು ತಜ್ಞರನ್ನು ಕರೆಸಿಕೊಳ್ಳಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿ ಹೃಷಿಕೇಶ್ ಸೊನಾವಣೆ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನ10 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ
ಮುಂದಿನ ಲೇಖನಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು