ಮನೆ ಅಪರಾಧ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿಯ ಕೊಲೆ: ಆರೋಪಿ ಬಂಧನ

ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿಯ ಕೊಲೆ: ಆರೋಪಿ ಬಂಧನ

0

ಬೆಂಗಳೂರು(Bengaluru): ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿ ಹೇಳಿದ್ದಕ್ಕೆ ಟಿಟಿ ಚಾಲಕನಿಗೆ ಚೂರಿಯಿಂದ ಇರಿದು ಹತ್ಯೆಗೈಗಿರುವ ಘಟನೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೋಲದೇವನಹಳ್ಳಿಯ ಟಿಟಿ ಚಾಲಕ ಕೇಶವಮೂರ್ತಿ (32) ಕೊಲೆಯಾದವ. ಭರತ್ ಬಂಧಿತ ಆರೋಪಿ.

ಗಿದ್ದರ ಟಿಟಿ ಚಾಲಕ ಕೇಶವಮೂರ್ತಿ ಹಾಗೂ ಗಾರ್ಮೆಂಟ್ಸ್ ಉದ್ಯೋಗಿ ಭರತ್ ಸಂಬಂಧಿಕರು. ಇತ್ತೀಚೆಗೆ ಭರತ್ ಪತ್ನಿ ಕೇಶವಮೂರ್ತಿ ಜತೆ “ನನ್ನ ಪತಿ ಭರತ್ ಸರಿಯಾಗಿ ಮನೆಗೆ ಬರುತ್ತಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ನೀವು ಸ್ವಲ್ಪ ಬುದ್ಧಿವಾದ ಹೇಳಿ’ ಎಂದು ಮನವಿ ಮಾಡಿದ್ದಳು. ಕೇಶವಮೂರ್ತಿ ಭರತನ ಪತ್ನಿಯನ್ನು ಸಮಾಧಾನ ಮಾಡಿ ನಾನು ನಿನ್ನ ಪತಿಗೆ ಬುದ್ಧಿ ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ್ದರು.

ಜ.13ರಂದು ರಾತ್ರಿ ಕೇಶವಮೂರ್ತಿ ಸ್ನೇಹಿತ ಕಲ್ಲೇಶ್ ಜತೆಗೆ ರಾಜಗೋಪಾಲನಗರದಲ್ಲಿ ಹೋಗುತ್ತಿದ್ದರು. ಆ ವೇಳೆ ಇವರಿಗೆ ಭರತ್ ಸಿಕ್ಕಿದ್ದ. ಪತ್ನಿಯನ್ನು ಚೆನ್ನಾಗಿ ನೋಡಿಕೋ, ಸಮಯಕ್ಕೆ ಸರಿಯಾಗಿ ಮನೆಗೆ ಹೋಗುವಂತೆ ಭರತ್’ಗೆ ಕೇಶವಮೂರ್ತಿ ಸಲಹೆ ನೀಡಿದ್ದ. ಇದಾದ ಬಳಿಕ ಕೇಶವಮೂರ್ತಿ, ಕಲ್ಲೇಶ್ ಹಾಗೂ ಭರತ್ ಬೈಕ್’ನಲ್ಲಿ ಚಿಕ್ಕಬಾಣಾವರದ ಮದ್ಯದಂಗಡಿಗೆ ಹೋಗಿ ಮದ್ಯಪಾನ ಮಾಡಿ ಮನೆಗೆ ಹಿಂತಿರುಗಲು ಮುಂದಾಗಿದ್ದರು. ಕೇಶವಮೂರ್ತಿ ಮತ್ತೆ ಭರತ್’ಗೆ ಬುದ್ಧಿ ಹೇಳಿದಾಗ ಆಕ್ರೋಶಗೊಂಡ ಭರತ್ ತನ್ನ ಜೇಬಿನಲ್ಲಿದ್ದ ಚೂರಿಯಿಂದ ಮಲ್ಲೇಶ್ ಹಾಗೂ ಕೇಶವಮೂರ್ತಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಕೇಶವಮೂರ್ತಿ ಜ.14ರಂದು ಮೃತಪಟ್ಟಿದ್ದಾನೆ.

ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಭರತ್’ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಿಂದಿನ ಲೇಖನಜ. 25ರವರೆಗೆ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ
ಮುಂದಿನ ಲೇಖನಬಲವಂತದ ಮತಾಂತರ ಪ್ರಶ್ನಿಸಿದ್ದ ಅರ್ಜಿ: ಸುಪ್ರೀಂ ಪೀಠದಲ್ಲಿ ಬದಲಾವಣೆ