ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಬೆಂಗಳೂರು(Bengaluru): ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿ ಹೇಳಿದ್ದಕ್ಕೆ ಟಿಟಿ ಚಾಲಕನಿಗೆ ಚೂರಿಯಿಂದ ಇರಿದು ಹತ್ಯೆಗೈಗಿರುವ ಘಟನೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಲದೇವನಹಳ್ಳಿಯ ಟಿಟಿ ಚಾಲಕ ಕೇಶವಮೂರ್ತಿ (32) ಕೊಲೆಯಾದವ. ಭರತ್ ಬಂಧಿತ ಆರೋಪಿ.
ಗಿದ್ದರ ಟಿಟಿ ಚಾಲಕ ಕೇಶವಮೂರ್ತಿ ಹಾಗೂ ಗಾರ್ಮೆಂಟ್ಸ್ ಉದ್ಯೋಗಿ ಭರತ್ ಸಂಬಂಧಿಕರು. ಇತ್ತೀಚೆಗೆ ಭರತ್ ಪತ್ನಿ ಕೇಶವಮೂರ್ತಿ ಜತೆ “ನನ್ನ ಪತಿ ಭರತ್ ಸರಿಯಾಗಿ ಮನೆಗೆ ಬರುತ್ತಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ನೀವು ಸ್ವಲ್ಪ ಬುದ್ಧಿವಾದ ಹೇಳಿ’ ಎಂದು ಮನವಿ ಮಾಡಿದ್ದಳು. ಕೇಶವಮೂರ್ತಿ ಭರತನ ಪತ್ನಿಯನ್ನು ಸಮಾಧಾನ ಮಾಡಿ ನಾನು ನಿನ್ನ ಪತಿಗೆ ಬುದ್ಧಿ ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ್ದರು.
ಜ.13ರಂದು ರಾತ್ರಿ ಕೇಶವಮೂರ್ತಿ ಸ್ನೇಹಿತ ಕಲ್ಲೇಶ್ ಜತೆಗೆ ರಾಜಗೋಪಾಲನಗರದಲ್ಲಿ ಹೋಗುತ್ತಿದ್ದರು. ಆ ವೇಳೆ ಇವರಿಗೆ ಭರತ್ ಸಿಕ್ಕಿದ್ದ. ಪತ್ನಿಯನ್ನು ಚೆನ್ನಾಗಿ ನೋಡಿಕೋ, ಸಮಯಕ್ಕೆ ಸರಿಯಾಗಿ ಮನೆಗೆ ಹೋಗುವಂತೆ ಭರತ್’ಗೆ ಕೇಶವಮೂರ್ತಿ ಸಲಹೆ ನೀಡಿದ್ದ. ಇದಾದ ಬಳಿಕ ಕೇಶವಮೂರ್ತಿ, ಕಲ್ಲೇಶ್ ಹಾಗೂ ಭರತ್ ಬೈಕ್’ನಲ್ಲಿ ಚಿಕ್ಕಬಾಣಾವರದ ಮದ್ಯದಂಗಡಿಗೆ ಹೋಗಿ ಮದ್ಯಪಾನ ಮಾಡಿ ಮನೆಗೆ ಹಿಂತಿರುಗಲು ಮುಂದಾಗಿದ್ದರು. ಕೇಶವಮೂರ್ತಿ ಮತ್ತೆ ಭರತ್’ಗೆ ಬುದ್ಧಿ ಹೇಳಿದಾಗ ಆಕ್ರೋಶಗೊಂಡ ಭರತ್ ತನ್ನ ಜೇಬಿನಲ್ಲಿದ್ದ ಚೂರಿಯಿಂದ ಮಲ್ಲೇಶ್ ಹಾಗೂ ಕೇಶವಮೂರ್ತಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಕೇಶವಮೂರ್ತಿ ಜ.14ರಂದು ಮೃತಪಟ್ಟಿದ್ದಾನೆ.
ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಭರತ್’ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.