ಮೈಸೂರು(Mysuru) : ನಗರದ ಅರಮನೆ ಮುಂಭಾಗವಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಇಂದು ಬೆಳಿಗ್ಗೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮೈಸೂರು ವಿಭಾಗದ ವತಿಯಿಂದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ಸಾಂಖ್ಯಿಕ ಅಧಿಕಾರಿ ಮಂಗಳ ದೇವತ ಅವರು ಉದ್ಘಾಟಿಸಿದರು. ಸ್ವಚ್ಚತಾ ಅಭಿಯಾನ ಕಾರ್ಯದಲ್ಲಿ ಮತ್ತೋರ್ವ ಹಿರಿಯ ಸಾಂಖ್ಯಿಕ ಅಧಿಕಾರಿ ಶಿಜೀಷ್, ರಜನೀಶ್ ಕುಮಾರ್ ಹಾಗೂ ಕಚೇರಿಯ ಸಿಬ್ಬಂಧಿ ಹಾಗೂ ಅಧಿಕಾರಿಗಳು ಸೇರಿದಂತೆ ಹಲವರು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.