ಮನೆ ರಾಜ್ಯ ಮೈಸೂರು: ಸಿದ್ದರಾಮಯ್ಯ ಬಾವ ನಿಧನ

ಮೈಸೂರು: ಸಿದ್ದರಾಮಯ್ಯ ಬಾವ ನಿಧನ

0

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಹೋದರಿ ಶಿವಮ್ಮ ಅವರ ಪತಿ ರಾಮೇಗೌಡ (69) ಶನಿವಾರ ಮೃತಪಟ್ಟಿದ್ದಾರೆ.

Join Our Whatsapp Group

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಿಗ್ಗೆ ನಗರದ ಜೆಎಸ್ ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದರು.

ಮೃತರು ಸಿದ್ದರಾಮನಹುಂಡಿಯಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದರು. ಮೃತರಿಗೆ ಪತ್ನಿ, ಮೂವರು ಹೆಣ್ಣು, ಒಂದು ಗಂಡುಮಗ ಇದ್ದಾರೆ. ಮಧ್ಯಾಹ್ನದ ನಂತರ, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಕಳೆಗುಂದಿದ ಸಂಭ್ರಮ

ಸಿದ್ದರಾಮಯ್ಯ ಅವರ ಸ್ವಂತ ಬಾವನೇ ಮೃತಪಟ್ಟಿದ್ದರಿಂದ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಕಳೆಗುಂದಿತ್ತು. ಊರಿನಲ್ಲಿ ಸಂಭ್ರಮಾಚರಣೆ ಮಾಡದೇ, ಕುಟುಂಬದ ದುಃಖದಲ್ಲಿ ಭಾಗಿಯಾದರು.

ಹಿಂದಿನ ಲೇಖನಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಭರ್ಜರಿ ಗೆಲುವು
ಮುಂದಿನ ಲೇಖನಶಿರಸಿ: ಕಾಂಗ್ರೆಸ್’​ನ ಭೀಮಣ್ಣ ನಾಯ್ಕ್ ಗೆಲುವು, ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು