ಮನೆ ರಾಜಕೀಯ ಶಿರಸಿ: ಕಾಂಗ್ರೆಸ್’​ನ ಭೀಮಣ್ಣ ನಾಯ್ಕ್ ಗೆಲುವು, ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು

ಶಿರಸಿ: ಕಾಂಗ್ರೆಸ್’​ನ ಭೀಮಣ್ಣ ನಾಯ್ಕ್ ಗೆಲುವು, ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು

0

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ಭದ್ರಕೋಟೆಯಾಗಿರುವ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್’​ನ ಭೀಮಣ್ಣ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

Join Our Whatsapp Group

ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಹಾಗೂ ಸ್ಪೀಕರ್​ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹೀನಾಯ ಸೋಲು ಕಂಡಿದ್ದಾರೆ.

ಕಾಂಗ್ರೆಸ್’​​ನಿಂದ ಭೀಮಣ್ಣ ನಾಯ್ಕ್ ಸ್ಪರ್ಧಿಸಿದ್ದು, 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ ಕಣದಲಿದ್ದರು, 53,134 ಮತಗಳನ್ನ ಪಡೆದು17,461ಮತಗಳ ಅಂತರದಿಂದ ಸೋತಿದ್ದರು.

ಇದೇ ಮೊದಲ ಬಾರಿಗೆ ಜೆಡಿಎಸ್​’ನಿಂದ ಉಪೇಂದ್ರ ಪೈ ಕಣಕ್ಕಿಳಿದಿದ್ದರು. ಶಿರಸಿ ಕ್ಷೇತ್ರ 1999ರಿಂದ ಬಿಜೆಪಿಯೇ ಗೆದ್ದಿದ್ದು, ಈ ಬಾರಿ ಮತದಾರ ಕಾಂಗ್ರೆಸ್​ ಕೈಹಿಡಿದಿದ್ದಾರೆ. ಅದರಂತೆ ಈ ಬಾರಿ ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ​ ನೇರಾನೇರ ಸ್ಪರ್ಧೆ ಏರ್ಪಟಿತ್ತು. ಈ ಬಾರಿ ತುಂಬಾ ವರ್ಷದ ಬಳಿಕ ಶಿರಸಿಯಲ್ಲಿ ಕಾಂಗ್ರೆಸ್​’ನ ಭೀಮಣ್ಣ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹಿಂದಿನ ಲೇಖನಮೈಸೂರು: ಸಿದ್ದರಾಮಯ್ಯ ಬಾವ ನಿಧನ
ಮುಂದಿನ ಲೇಖನರಾಮನಗರ: ಅಭೂತಪೂರ್ವ ಗೆಲುವು ದಾಖಲಿಸಿದ ಡಿ.ಕೆ.ಶಿವಕುಮಾರ್