ಮನೆ ರಾಜಕೀಯ ನಳಿನ್ ಕುಮಾರ್ ಕಟೀಲ್ ವಿದೂಷಕ ಇದ್ದಂತೆ, ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

ನಳಿನ್ ಕುಮಾರ್ ಕಟೀಲ್ ವಿದೂಷಕ ಇದ್ದಂತೆ, ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

0

ಬೆಂಗಳೂರು(Bengaluru): ನಳೀನ್ ಕುಮಾರ್ ಕಟೀಲ್  ವಿಧೂಷಕ ಇದ್ದಂತೆ  ಮೆಚ್ಯೂರಿಟಿ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪಿಎಫ್ ಐ ಮತ್ತು ಎಸ್ ಡಿಪಿಐಗಳು ಬೆಳೆಯಲು ಸಿದ‍್ಧರಾಮಯ್ಯ ಕಾರಣ ಎಂದು ಆರೋಪಿಸಿದ್ಧ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್’ಗೆ ತಿರುಗೇಟು ನೀಡಿರುವ ಅವರು, ಪ್ರತಿಪಕ್ಷದಲ್ಲಿದ್ದ ಇವರು ಯಾಕೆ ಮಾತನಾಡಿಲಿಲ್ಲ . ಇವರ ಬಾಯಲ್ಲೇನು ಕಡುಬು ಸಿಕ್ಕಿ ಹಾಕಕೊಂಡಿತ್ತಾ…? ಎಂದು ಪ್ರಶ್ನಿಸಿದರು.

ಸಿಎಂ,  ಸರ್ಕಾರದ ವಿರುದ್ಧ ಆರೋಪ ಮಾಡಿದ್ದೀವಿ. ಜಾತಿ ಮೇಲೆ ಅಲ್ಲ.  ತನಿಖೆ ಮಾಡಿಸೋದು ಬಿಟ್ಟು ಜಾತಿ ವಿಷಯ ಎತ್ತಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ನಮ್ಮ ಕಾಲದ್ದೂ ಸೇರಿಸಿ ತನಿಖೆ ಮಾಡಿಸಿ. ತನಿಖೆ ಮಾಡಿಸಲು ಭಯವೇಕೆ..?  ಜನರ ಗಮನ ಸೆಳೆಯಲು . ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಇವರಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು.

ನಮ್ಮ ವಿರುದ್ಧ ಪ್ರಧಾನಿ ಮೋದಿ 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಅದಕ್ಕೆ ಯಾವ ದಾಖಲೆ ಕೊಟ್ಟಿದ್ದರು. ಆಗ ನಳೀನ್ ಎಲ್ಲಿದ್ದರು..? ಇವರೇ ಅಲ್ವಾ ಮೋದಿ ಕಡೆಯಿಂದ ಹೇಳಿಸಿದ್ದು ಎಂದು ಸಿದ್ಧರಾಮಯ್ಯ ಚಾಟಿ ಬೀಸಿದರು.

ಹಿಂದಿನ ಲೇಖನರೈತರ ಪಂಪ್ ಸೆಟ್’ಗೆ ವಿದ್ಯುತ್  ಮೀಟರ್ ಅಳವಡಿಸಿದರೆ ಅದನ್ನು ಕಿತ್ತೊಗೆಯುವ ಆಂದೋಲನ ಆರಂಭ: ಮಧು ಬಂಗಾರಪ್ಪ
ಮುಂದಿನ ಲೇಖನಸರಳ ಬದುಕಿನಿಂದ ಸಕಾರಾತ್ಮಕ ಚಿಂತನೆ