ಮನೆ ಅಪರಾಧ ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

0

ಬೆಂಗಳೂರು: ಪತಿ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ತಿಲ್ಲ ಎಂದು  ಆರೋಪಿಸಿ ಪತ್ನಿ ಶುಕ್ರವಾರ ಸಂಜೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಾಯಿತ್ರಿ ನಗರದಲ್ಲಿ ನಡೆದಿದೆ.

28 ವರ್ಷದ ವಿಂದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆ. 9 ತಿಂಗಳ ಹಿಂದೆ ರಾಕೇಶ್ ಎಂಬಾತನನ್ನು ಪ್ರೀತಿಸಿ ವಿಂದ್ಯಾಶ್ರೀ ಮದುವೆ ಆಗಿದ್ದರು. ಮದುವೆ ಬಳಿಕವೂ ರಾಕೇಶ್ ಯುವತಿಯರ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಡಿದ್ದನು ಎಂಬ ಆರೋಪಗಳು ಕೇಳಿ ಬಂದಿವೆ.

ಯು ಆರ್ ಎ ಸ್ಯಾಡಿಸ್ಟ್ ಅಂಡ್ ಸೈಕೋ, ಯು ಆರ್ ದ ವರ್ಸ್ಟ್ ಪರ್ಸನ್ ಎಂದು ಡೆತ್ ನೋಟ್ ಬರೆದ ವಿಂದ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಂದ್ಯಾಶ್ರೀ ಬರೆದ ಡೆತ್ ನೋಟ್ ಪತ್ರದಲ್ಲಿ ವಿಂದ್ಯಾಶ್ರೀ ಪತಿ ರಾಕೇಶ್ ಹೇಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಯಾಕೋ ನನ್ನ ಮದುವೆಯಾದೆ. ನನ್ನ ಜೀವನ ಹಾಳು ಮಾಡಿದೆ. ನೀನು ಹೇಗೆ ಅನ್ನೋದು ಮದುವೆ ಆದ್ಮೇಲೆ ಗೊತ್ತಾಯ್ತು. ನೀನು ಎಷ್ಟು ಹುಡುಗಿಯರ ಜೊತೆ ಆಟ ಆಡಿದ್ದಿಯಾ ವಿಷಯ ಗೊತ್ತಾಗಿದೆ. 

ಹುಡುಗಿಯರೇನು ಸೆಕ್ಸ್ ಮೆಟಿರಿಯಲ್ ಗಳಲ್ಲ. ಅವರಿಗೂ ಭಾವನೆಗಳು ಇರುತ್ತವೆ. ಆದ್ರೆ ಯಾಕೆ ನನ್ನನ್ನು ಮದುವೆಯಾದ ರಾಕಿ. ನನ್ನನ್ನು ಪ್ರೀತಿಸು ಎಂದು ನಾನು ಕೇಳಲ್ಲ. ನೀನು ನನಗೆ ಫ್ರೆಂಡ್ ಆಗಿರಬೇಕಿತ್ತು. 

ನೀನು ನನ್ನ ಜೀವನಕ್ಕೆ ಬರೋದಕ್ಕೂ ಮೊದಲು ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದೆ. ಆದ್ರೆ ನೀನು ಬಂದ್ಮೇಲೆ ಬರೀ ನೋವು ಮತ್ತು ಕಣ್ಣೀರಿನಿಂದ ತುಂಬಿದೆ. ಅಪ್ಪ ಅಮ್ಮನನ್ನ ಒಪ್ಪಿಸಿ ನಿನ್ನನ್ನು ಮದುವೆಯಾಗಿದ್ದು ನನ್ನ ತಪ್ಪು ಎಂದು ವಿಂದ್ಯಶ್ರೀ ಪತ್ರದಲ್ಲಿ ಬರೆದಿದ್ದಾರೆ. 

ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪತಿ ರಾಕೇಶ್ ನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿ ಇಂದು 106 ಮಂದಿಗೆ ಕೊರೊನಾ ಪಾಸಿಟಿವ್
ಮುಂದಿನ ಲೇಖನಯಮ್ಮಿಗನೂರಿಗೆ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್