ಮನೆ ರಾಜ್ಯ ಮಂಡ್ಯ: ಕಲ್ಲುಕ್ವಾರಿ ಸರ್ವೆಗೆ ತೆರಳಿದ್ದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಆತ್ಮಹತ್ಯೆಗೆ ಯತ್ನ

ಮಂಡ್ಯ: ಕಲ್ಲುಕ್ವಾರಿ ಸರ್ವೆಗೆ ತೆರಳಿದ್ದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಆತ್ಮಹತ್ಯೆಗೆ ಯತ್ನ

0

ಮಂಡ್ಯ: ಜಮೀನಿನ ಸಮೀಕ್ಷೆಗೆ ತೆರಳಿದ್ದ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.

ಗಣಿ ಇಲಾಖೆ ಅಧಿಕಾರಿಗಳು ಕಲ್ಲುಕ್ವಾರಿ ಬಗ್ಗೆ ಸರ್ವೆಗೆ ಮುಂದಾದ ವೇಳೆ ಬಂಕಾಪುರ ಗ್ರಾಮದ ಬೋರೇಗೌಡ ಕುಟುಂಬಸ್ಥರು ಹೈಡ್ರಾಮ ಸೃಷ್ಠಿಸಿದ್ದಾರೆ.

ಸಂಕನಹಳ್ಳಿ ಗ್ರಾಮದ ಸರ್ವೆ ನಂಬರ್ 54ರ ಜಮೀನಿನ ಸಮೀಕ್ಷೆ ನಡೆದಿತ್ತು. ಇಲ್ಲಿ ಕೆ.ಎಂ.ರವಿ ಎಂಬುವವರು ಗುತ್ತಿಗೆ ಆಧಾರದಲ್ಲಿ ಕಲ್ಲುಕ್ವಾರಿಗೆ ಅನುಮತಿ ಪಡೆದಿದ್ದರು. ಬಳಿಕ ರವಿ ಅವರು ಮಂಜೂರಾದ ಜಾಗದ ಜಂಟಿ ಸರ್ವೆಗೆ ಮನವಿ ಮಾಡಿದ್ದರು. ತಾಲೂಕು ಭೂಮಾಪಕ, ಗಣಿ ಅಧಿಕಾರಿಗಳಿಂದ ಜಂಟಿ ಸರ್ವೆ ಕಾರ್ಯ ನಡೆಯಬೇಕಿತ್ತು.

ಜಾಗ ಕೈತಪ್ಪುವ ಭೀತಿಯಿಂದ ಬೋರೇಗೌಡ ಕುಟುಂಬಸ್ಥರು ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಅಧಿಕಾರಿಗಳು ನಾಗಮಂಗಲ ಠಾಣೆಗೆ ದೂರು ನೀಡಿದ್ದಾರೆ. ರಾಮಚಂದ್ರ, ಬಸವರಾಜು ಸೇರಿದಂತೆ ಹಲವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

ಹಿಂದಿನ ಲೇಖನನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಗಳ ಮೇಲೆ ಹರಿದ ಲಾರಿ: ನಾಲ್ವರ ಸಾವು
ಮುಂದಿನ ಲೇಖನನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ: ಸಿದ್ದರಾಮಯ್ಯ