ಮನೆ ರಾಜ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ: ಬಿ ಎಸ್ ಯಡಿಯೂರಪ್ಪ

ರಾಜ್ಯದ ಬಿಜೆಪಿ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ: ಬಿ ಎಸ್ ಯಡಿಯೂರಪ್ಪ

0

ಬೆಂಗಳೂರು: ರಾಜ್ಯದ ಬಿಜೆಪಿ ನಾಯಕರಲ್ಲಿ ಈಗ ಯಾವುದೇ ಅಸಮಾಧಾನವಿಲ್ಲ, ಎಲ್ಲರನ್ನೂ ಕರೆಸಿ ಅವರವರ ಸಮಸ್ಯೆಗಳನ್ನು ಬಗೆಹರಿಸಿದ್ದಾಗಿ ಹಿರಿಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ  ತಿಳಿಸಿದರು.

Join Our Whatsapp Group

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯ ಮತ್ತು ದೇಶದೆಲ್ಲೆಡೆ ಬಿಜೆಪಿ ಪರ ಉತ್ತಮ ವಾತಾವರಣವಿದೆ, 400 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ, ಕರ್ನಾಟಕದ ಎಲ್ಲ 28 ಸ್ಥಾನಗಳನ್ನು ಜಯಿಸಿ ಗೆದ್ದವರನ್ನು ದೆಹಲಿಗೆ ಕರೆದುಕೊಂಡು ಬರುವುದಾಗಿ ಅಮಿತ್ ಶಾ  ಅವರಿಗೆ ಭರವಸೆ ನೀಡಿದ್ದೇನೆ, ಜನರ ಬೆಂಬಲ ನಮ್ಮೊಂದಿಗಿದೆ, ದೇವರ ಕೃಪೆ ನಮ್ಮ ಮೇಲಿದೆ ಮತ್ತು ಎಲ್ಲೆಡೆ ಮೋದಿ ಅಲೆ ಇದೆ ಎಂದು ಯಡಿಯೂರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14 ರಂದು ಮಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ, ಬೆಂಗಳೂರಲ್ಲೂ ಮಾಡಬಹುದು ಎಂದ ಯಡಿಯೂರಪ್ಪ ಬರ ಪರಿಹಾರ ನಿಧಿಯ ಬಗ್ಗೆ ಮಾತಾಡಲು ಇದು ಸೂಕ್ತ ಸಮಯವಲ್ಲ, ಚುನಾವಣೆಯ ನಂತರ ಮಾತಾಡುವುದಾಗಿ ಹೇಳಿದರು.

28 ಸ್ಥಾನ ಗೆಲ್ಲೋದು ಕನಸು ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅದನ್ನೇ ಹೇಳುತ್ತಾರೆ, ಬೇರೇನಿದೆ ಅವರಲ್ಲಿ ಹೇಳೋದಿಕ್ಕೆ ಎಂದರು.

ಹಿಂದಿನ ಲೇಖನಯುಗಾದಿ: ಸಿದ್ದರಾಮಯ್ಯ ಅವರಿಗೆ ವ್ಯಂಗ್ಯವಾಗಿ ಶುಭ ಕೋರಿದ ಬಿಜೆಪಿ
ಮುಂದಿನ ಲೇಖನಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುವವರನ್ನೆಲ್ಲಾ ಜೈಲಿಗೆ ಹಾಕಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌