ಮನೆ ಮನರಂಜನೆ ಜೂ. ಎನ್’ಟಿಆರ್ ‘ದೇವರ’ ಚಿತ್ರದಲ್ಲಿ ‘ಕೆಜಿಎಫ್’ ಕಲಾವಿದ ತಾರಕ್ ಪೊನ್ನಪ್ಪ

ಜೂ. ಎನ್’ಟಿಆರ್ ‘ದೇವರ’ ಚಿತ್ರದಲ್ಲಿ ‘ಕೆಜಿಎಫ್’ ಕಲಾವಿದ ತಾರಕ್ ಪೊನ್ನಪ್ಪ

0

ಕಲಾವಿದರಿಗೆ ಭಾಷೆಯ ಗಡಿಯಲ್ಲಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಕನ್ನಡದ ಸಾಕಷ್ಟು ಕಲಾವಿದರು ತೆಲುಗಿನ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಮತ್ತೊಬ್ಬ ಪ್ರತಿಭಾವಂತ ನಟ ತಾರಕ್ ಪೊನ್ನಪ್ಪ ಸಹ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಜೂ ಎನ್ಟಿಆರ್ ಅವರ ಜತೆ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Join Our Whatsapp Group

ಕನ್ನಡದ ‘ಕೆಜಿಎಫ್’, ‘ಅಮೃತಾ ಅಪಾರ್ಟ್ಮೆಂಟ್’, ‘ಗಿಲ್ಕಿ’ ಸಿನಿಮಾಗಳಲ್ಲಿ ತಮ್ಮದೇ ಆದ ವಿಶಿಷ್ಟ ನಟನೆಯ ಮೂಲಕ ಗಮನ ಸೆಳೆದಿದ್ದ ನಟ ತಾರಕ್ ಪೊನ್ನಪ್ಪ ಈಗಾಗಲೇ ‘ದಿ ಹಂಡ್ರೇಡ್’ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಅದರ ಮೂಲಕ ಇವರು ‘ದೇವರ’ ಚಿತ್ರಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ. ‘ಇಲ್ಲಿಗೆ ಎಂಟ್ರಿ ಪಡೆಯಲು ‘ದಿ ಹಂಡ್ರೇಡ್’ ಸಿನಿಮಾದ ನಿರ್ದೇಶನ ತಂಡ ಕಾರಣ. ಇವರ ಸಲಹೆಯಂತೆ ಅಡಿಷನ್ ಗೆ ವಿಡಿಯೋ ಕಳುಹಿಸಿಕೊಟ್ಟಿದ್ದೆ. ನನ್ನ ನಟನೆ ನೋಡಿ ‘ದೇವರ’ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿದ್ದು ಸಂತಸ’ಎಂದು ಹೇಳಿದ್ದಾರೆ ನಟ ತಾರಕ್.

 ‘ದೇವರ ಸಿನಿಮಾದಲ್ಲಿ ನನ್ನದು ನೆಗೆಟಿವ್ ಪಾತ್ರ. ಒಂದು ಗುಂಪಿಗೆ ನಾಯಕ ಎಂದರೂ ತಪ್ಪಿಲ್ಲ. ಲುಕ್ಸ್ , ಕಾಸ್ಟ್ಯೂಮ್ ಎಲ್ಲವೂ ವಿಭಿನ್ನವಾಗಿದ್ದು ನನಗೆ ಪಾತ್ರದ ಬಗ್ಗೆ ಖುಷಿಯಿದೆ. ಈಗಾಗಲೇ ನಾಲ್ಕೈದು ದಿನಗಳ ಚಿತ್ರೀಕರಣ ಮುಗಿಸಿದ್ದೇನೆ. ಅದರಲ್ಲಿ ಒಂದು ದಿನ ಜೂ.ಎನ್ಟಿಆರ್ ಅವರ ಜತೆಗೆ ಇತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ದೃಶ್ಯಗಳು ಅವರ ಜತೆಯಲ್ಲಿರುತ್ತವೆ’ಎಂದು ಸಂತಸ ವ್ಯಕ್ತಪಡಿಸಿದ್ದಾರೆ ತಾರಕ್.

 ‘ನನಗೆ ಈ ರೀತಿ ತೆಲುಗು ಸಿನಿಮಾಗಳಲ್ಲಿ ಅವಕಾಶ ಸಿಗಲು ‘ಕೆಜಿಎಫ್’ ಸಿನಿಮಾವೂ ಕಾರಣ. ಯಾರೇ ಮೊದಲು ಮಾತನಾಡಿಸಿದರೂ ‘ಕೆಜಿಎಫ್’ ಬಗ್ಗೆ ಕೇಳುತ್ತಾರೆ. ಅಂತಹ ಒಂದು ಮೆಗಾ ಪ್ರಾಜೆಕ್ಟ್ ನಲ್ಲಿ ನಟಿಸಿದ್ದೇ ನನ್ನ ಅದೃಷ್ಟ. ಪ್ರತಿ ಸಿನಿಮಾದಲ್ಲಿಯೂ ಚಾಲೆಂಜಿಂಗ್ ಎನಿಸುವಂತಹ ಪಾತ್ರಗಳು ಸಿಗುತ್ತಿವೆ’ಎನ್ನುವುದು ತಾರಕ್ ಅವರ ಮಾತು. ತಾರಕ್ ರದ್ದು ‘ದೇವರ’ ಸಿನಿಮಾದಲ್ಲಿ ದೊಡ್ಡ ಪಾತ್ರವಾಗಿದ್ದು, ಅದಕ್ಕಾಗಿ ಸುಮಾರು 60 ದಿನಗಳ ಡೇಟ್ಸ್ ತೆಗೆದುಕೊಂಡಿದ್ದಾರಂತೆ.

“ದೇವರ ಸಿನಿಮಾದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಹೈದರಾಬಾದ್ ನಲ್ಲಿ ದೊಡ್ಡ ದೊಡ್ಡ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ” ಎಂದು ನಟ ತಾರಕ್ ಪೊನ್ನಪ್ಪ ಹೇಳಿದ್ದಾರೆ.

ಎನ್ ಟಿರ್ ಅವರ 30ನೇ ಸಿನಿಮಾ ಇದಾಗಿದೆ. ‘ಜನತಾ ಗ್ಯಾರೇಜ್’ ನಂತರ ಎನ್ ಟಿ.ಆರ್ ಮತ್ತು ನಿರ್ದೇಶಕ ಕೊರಟಾಲ ಶಿವ ಅವರು ದೇವರ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್, ಹರಿಕೃಷ್ಣ ಕೆ ಅವರು ಯುವಸುಧಾ ಆರ್ಟ್ಸ್ ಮತ್ತು ಎನ್ ಟಿ.ಆರ್ ಆರ್ಟ್ಸ್ ಸಂಸ್ಥೆಗಳಡಿಯಲ್ಲಿ ನಿರ್ಮಿಸುತ್ತಿದ್ದಾರೆ. 2024 ಏಪ್ರಿಲ್ 5ರಂದು ದೇವರ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಕೂಡ ನಟಿಸುತ್ತಿದ್ದು ಈ ಚಿತ್ರದಲ್ಲಿ ಚೈತ್ರಾ ರೈ ಕೂಡ ಬಣ್ಣ ಹಚ್ಚುತ್ತಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ: ನಳಿನ್ ಕುಮಾರ್ ಕಟೀಲ್
ಮುಂದಿನ ಲೇಖನಖಾತೆ ಹಂಚಿಕೆಯಿಂದ ಭುಗಿಲೆದ್ದ ಅಸಮಾಧಾನ: ರಾಜೀನಾಮೆಗೆ ಮುಂದಾದ ರಾಮಲಿಂಗಾರೆಡ್ಡಿ?