ಮನೆ ರಾಜ್ಯ ನಾಡಗೀತೆಗೆ ಅವಮಾನ ಮಾಡಿಲ್ಲ: ರೋಹಿತ್ ಚಕ್ರತೀರ್ಥ

ನಾಡಗೀತೆಗೆ ಅವಮಾನ ಮಾಡಿಲ್ಲ: ರೋಹಿತ್ ಚಕ್ರತೀರ್ಥ

0

ಬೆಂಗಳೂರು(Bengaluru): ನಾನು ಯಾವತ್ತೂ ನಾಡಗೀತೆಗೆ ಅವಮಾನ ಮಾಡಿಲ್ಲ ಎಂದು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಾಹಿತಿಗಳ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, ಅವರು ಸಾಹಿತಿಗಳಾ ಅನ್ನೋ ಪ್ರಶ್ನೆ ಎದುರಾಗಿದೆ. ಟೂಲ್ ಕಿಟ್ ನಿಂದ ಹೀಗೆಲ್ಲಾ ಮಾಡುತ್ತಿದ್ದಾರೆ. ಹಂಪ ನಾಗರಾಜಯ್ಯ ಸೇರಿದಂತೆ ಅನೇಕರು ಇವತ್ತು ರಾಜೀನಾಮೆ ಕೊಡ್ತಿದ್ದಾರೆ. ನನ್ನ ಮೇಲಿನ ಟಾರ್ಗೆಟ್ ಗಾಗಿ ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಪಠ್ಯಪುಸ್ತಕ ವಿಚಾರ ಬೇಡವಾಗಿದೆ ಎಂದು ಆರೋಪಿಸಿದರು.
ಸಾಹಿತಿಗಳು ಟ್ರಸ್ಟಿಗಳಾಗಿದ್ದಾಗ ಅವರ ಅಕ್ರಮದ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಟ್ರಸ್ಟ್ ಗೆ ಬರುವ ಲಕ್ಷಾಂತರ ರೂ.ಹಣ ಎಲ್ಲಿ ಹೋಗ್ತಿದೆ ಅಂತ ಕೇಳಿದ್ದೆ. ಈ ಕಾರಣಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿ ಸಾಹಿತಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರು.

ಹಿಂದಿನ ಲೇಖನಬಸವಣ್ಣ ಸಿದ್ದಾಂತಕ್ಕೆ  ಅಪಚಾರವಾದ್ರೆ ಸಹಿಸಲ್ಲ: ಜಯಮೃತ್ಯುಂಜಯ ಸ್ವಾಮೀಜಿ
ಮುಂದಿನ ಲೇಖನನಮ್ಮ ಪಕ್ಷದ ಅಭ್ಯರ್ಥಿಗಳು ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ : ಬಿಎಸ್‌ವೈ