ಮನೆ ಅಪರಾಧ ಹಳೆ ದ್ವೇಷ: ರೌಡಿಶೀಟರ್​ ಬರ್ಬರ ಹತ್ಯೆ

ಹಳೆ ದ್ವೇಷ: ರೌಡಿಶೀಟರ್​ ಬರ್ಬರ ಹತ್ಯೆ

0

ಬಳ್ಳಾರಿ(Ballari): ಹಳೇ ದ್ವೇಷ ಹಾಗೂ ಲವ್​ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್​ನ​ ಬರ್ಬರ ಹತ್ಯೆ ನಡೆದಿರುವ ಘಟನೆ ಅಹಂಭಾವಿ ಪ್ರದೇಶದಲ್ಲಿ ಸಂಭವಿಸಿದೆ.

ರೌಡಿಶೀಟರ್ ಮಹೇಂದ್ರ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಗ್ಯಾಂಗ್​ವೊಂದು ಮಹೇಂದ್ರನನ್ನು ಲಾಂಗು, ಮಚ್ಚುಗಳಿಂದ ಕೊಚ್ಚಿ ಕೊಲೆಗೈದಿದೆ. ರೌಡಿಶೀಟರ್ ಮಹೇಂದ್ರ ಬೇಲ್​ ಮೇಲೆ ಜೈಲಿನಿಂದ ಹೊರಬಂದಿದ್ದ. ಮಹೇಂದ್ರನ ಬಾಮೈದನ ಲವ್​ ಕೇಸ್​ನಲ್ಲಿ ವರ್ಷದ ಹಿಂದೆ ಗಲಾಟೆ ನಡೆದಿತ್ತು. ಅದೇ ಗಲಾಟೆ ವಿಚಾರದಲ್ಲಿ ಈಗ ರೌಡಿಶೀಟರ್​ ಮಹೇಂದ್ರನ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ನವೀನ್, ಕೇಶವ, ಶಂಕರ, ನಾರಾಯಣ, ವಂಶಿ, ಧನಂಜಯನಿಂದ ಕೃತ್ಯ ನಡೆದಿದೆ.

ಇನ್ನು ಹಂತಕರಿಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಬೆಂಬಲ ನೀಡಿದ್ದಾರೆ ಎಂದು ಮಹೇಂದ್ರನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

 ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್​ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರೌಡಿಶೀಟರ್​ ಮಹೇಂದ್ರನ ಹತ್ಯೆ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಹಿಂದಿನ ಲೇಖನವೃದ್ಧೆ ತಲೆ ಒಡೆದಿದ್ದ ಆರೋಪಿ ಆತ್ಮಹತ್ಯೆಗೆ ಶರಣು
ಮುಂದಿನ ಲೇಖನಜರ್ಮನಿ ತಲುಪಿದ ಮೋದಿ: ಪ್ರಧಾನಿ ವಿದೇಶಿ ಪ್ರವಾಸ ಆರಂಭ