ಮನೆ ಅಪರಾಧ ವೃದ್ಧೆ ತಲೆ ಒಡೆದಿದ್ದ ಆರೋಪಿ ಆತ್ಮಹತ್ಯೆಗೆ ಶರಣು

ವೃದ್ಧೆ ತಲೆ ಒಡೆದಿದ್ದ ಆರೋಪಿ ಆತ್ಮಹತ್ಯೆಗೆ ಶರಣು

0

ಶಿವಮೊಗ್ಗ(Shivamogga): ಸಾಲ ತೀರಿಸಲು ವೃದ್ಧೆ ತಲೆ ಒಡೆದಿದ್ದ ಆರೋಪಿ ರಾಜೇಂದ್ರ ಜಿಲ್ಲೆಯ ಭದ್ರಾವತಿ ಲಾಡ್ಜ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಾಜೇಂದ್ರ ಇಸ್ಪೀಟ್ ಹುಚ್ಚಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ. ಸಾಲಗಾರರ ಕಿರುಕುಳ, ಒಡವೆ ಬಿಡಿಸಿಕೊಡುವಂತೆ ಹೆಂಡತಿಗೆ ಒತ್ತಡ ಹಾಕುತ್ತಿದ್ದನು. ಸ್ಥಿತಿವಂತನಾಗಿದ್ದ ರಾಜೇಂದ್ರ ವಿಧಿಯಿಲ್ಲದೆ ಏಪ್ರಿಲ್ 20ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದನು.

ಬಾಡಿಗೆ ಕೇಳುವ ನೆಪದಲ್ಲಿ ತೆರಳಿ ವೈದ್ಧೆಯ ಮೇಲೆ ಸ್ಪ್ಯಾನರ್​ನಿಂದ ಹಲ್ಲೆ ನಡೆಸಿ 48 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಅಷ್ಟರಲ್ಲೆ ಆರೋಪಿ ರಾಜೇಂದ್ರ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.

ಹಿಂದಿನ ಲೇಖನಜೆಎಸ್‌ಎಸ್‌ ಸೇತುಬಂಧ ಕೋರ್ಸಿಗೆ ಹೆಚ್ಚಿನ ಬೇಡಿಕೆ
ಮುಂದಿನ ಲೇಖನಹಳೆ ದ್ವೇಷ: ರೌಡಿಶೀಟರ್​ ಬರ್ಬರ ಹತ್ಯೆ