ಕಲಬುರಗಿ: ಬರಗಾಲದಿಂದ ತತ್ತರಿಸಿರುವ ರೈತರಿಗೆ ಗಾಯದ ಮೇಲೆ ಗೆರೆ ಎಳೆದಂತೆ ಪಹಣಿ ದರ 10 ರೂ ಇದ್ದಿರುವುದನ್ನು ಒಮ್ಮೆಲೆ 25 ರೂ.ಗೆ ಹೆಚ್ಚಳ ಮಾಡಿರುವುದನ್ನು ಕೇಳಿದ ವಿಪಕ್ಷ ನಾಯಕ ಆರ್. ಅಶೋಕ್ ಗಾಬರಿಯಾದರು.
ಜಿಲ್ಲೆಯ ಕಡಗಂಚಿ ಗ್ರಾಮದಲ್ಲಿ ಬರಗಾಲ ವೀಕ್ಷಿಸಿ ರೈತರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ರೈತರೊಬ್ಬರು ಸರ್ಕಾರ ರಾತ್ರೋರಾತ್ರಿ ಪಹಣಿ ದರ 10 ಇದ್ದಿರುವುದನ್ನು 25 ರೂ.ಹೆಚ್ಚಿಸಲಾಗಿದೆ. ಚಿಲ್ಲರೆಯಿಲ್ಲ ಎಂದು 30 ರೂ ಪಡೆಯಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪಹಣಿ ದರ ಮೂರು ಪಟ್ಟು ಹೆಚ್ಚಳವಾಗಿದೆ. ಪ್ರತಿಯೊಂದಕ್ಕೂ ಪಹಣಿ ಕೇಳಲಾಗುತ್ತಿದೆ. ಹೀಗಾಗಿ ಪಹಣಿ ದರ ಹೆಚ್ಚಳ ವಾಪಸಾತಿ ಪಡೆಯುವಂತಾಯಿತು ವಿಪಕ್ಷ ನಾಯಕರಿಗೆ ಆಗ್ರಹಿಸಿದರು.
ಪಹಣಿ ದರ ಹೆಚ್ಚಳವಾಗಿರುವುದನ್ನು ಕೇಳಿ ಗಾಬರಿಯಾದ ವಿಪಕ್ಷ ನಾಯಕ ಅಶೋಕ, ದರ ಯಾವಾಗ ಹೆಚ್ಚಳ ಮಾಡಲಾಗಿದೆ ಎಂದು ಸ್ಥಳದಲ್ಲಿದ್ದ ಆಳಂದ ತಹಶಿಲ್ದಾರ್ ಅವರನ್ನು ಕರೆದು ಕೇಳಿದರು. ಹೌದು ಸರ್, ಈಗಷ್ಟೇ ಪಹಣಿ ದರ ಹೆಚ್ಚಳವಾಗಿದೆ ಎಂದರು. ಪಹಣಿ ದರ ಹೆಚ್ಚಳ ಮಾಡಿರುವ ಬಗ್ಗೆ ಆದೇಶ ಹೊರಡಿಸಲಾಗಿದೆಯೇ ಎಂಬುದರ ಕುರಿತು ಸಂಜೆಯೊಳಗೆ ಆದೇಶ ಪ್ರತಿ ನೀಡಿ ಎಂದರು.
ಎಲ್ಲದಕ್ಕೂ ಪಹಣಿ ಕೇಳಲಾಗುತ್ತಿದೆ. ಮೊದಲೇ ವ್ಯಾಪಕ ಬರಗಾಲ ಆವರಿಸಿದೆ. ಹಿಂಗಾರು- ಮುಂಗಾರು ಕೈ ಕೊಟ್ಟಿದ್ದರಿಂದ ಮುಂದೇನು? ಎಂಬ ಚಿಂತೆ ಎದುರಾಗಿದೆ. ಹೀಗಾಗಿ ದರ ಹೆಚ್ಚಳ ಮಾಡಿರುವುದನ್ನು ವಾಪಸಾತಿ ಮಾಡುವಂತೆ ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದರು.
ಪಹಣಿ ದರ ಹೆಚ್ಚಳವಾಗಿದ್ದೆ ತಮ್ಮ ಗಮನಕ್ಕಿಲ್ಲ. ವಿದ್ಯುತ್ ಸಮಸ್ಯೆ ನಿವಾರಿಸಲು ಸರ್ಕಾರ ಮುಂದಾಗುತ್ತಿಲ್ಲ. ಟಿಸಿ ದುರಸ್ತಿಗೆ ಹಣ ಕೇಳಲಾಗುತ್ತಿದೆ. ಕೃಷಿ ಸಮ್ಮಾನ ನಿಧಿ ಪರಿಹಾರ ಬಂದ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.