ಮನೆ ಅಪರಾಧ ತಪ್ಪೊಪ್ಪಿಕೊಂಡ ಪಂಜಾಜ್ ಸಿಎಂ ಸೋದರಳಿಯ:  ಜಾರಿ ನಿರ್ದೇಶನಾಲಯ ಹೇಳಿಕೆ

ತಪ್ಪೊಪ್ಪಿಕೊಂಡ ಪಂಜಾಜ್ ಸಿಎಂ ಸೋದರಳಿಯ:  ಜಾರಿ ನಿರ್ದೇಶನಾಲಯ ಹೇಳಿಕೆ

0

ಪಂಜಾಬ್: ಅಧಿಕಾರಿಗಳ ವರ್ಗಾವಣೆ ಮತ್ತು ಮರಳು ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ ವಿಚಾರಣೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

ಗಣಿಗಾರಿಕೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಮತ್ತು ಮರಳು ಮಾಫಿಯಾದಿಂದ 10 ಕೋಟಿ ರೂಪಾಯಿ ಹಣ ಪಡೆದಿರುವುದಾಗಿ ಕಸ್ಟಡಿ ವಿಚಾರಣೆ ವೇಳೆ ಭೂಪಿಂದರ್ ಸಿಂಗ್ ಹನಿ ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟನೆ ನೀಡಿದೆ.

Advertisement
Google search engine

ಪಂಜಾಬ್‌ನಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಜಲಂಧರ್​ನಲ್ಲಿ ದಾಳಿ ನಡೆಸಿ, ಫೆಬ್ರವರಿ 3ರಂದು ಭೂಪಿಂದರ್ ಸಿಂಗ್ ಅವರನ್ನು ಬಂಧಿಸಿತ್ತು.

ಹಿಂದಿನ ಲೇಖನಮರಕ್ಕೆ ಕಾರು ಡಿಕ್ಕಿ: ಮೂವರು ಸಾವು
ಮುಂದಿನ ಲೇಖನಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶ: ಕೆ.ಎಸ್.ಈಶ್ವರಪ್ಪ