ಹಾಸನ: ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಆರು ದಿನಗಳು ಬಾಕಿ ಉಳಿದಿದ್ದು, ವಿವಿಧ ಪಕ್ಷಗಳ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.
ಈ ನಡುವೆ ಪ್ರಚಾರಕ್ಕೆ ಬಂದಾಗ ಸಮಸ್ಯೆ ಬಗೆಹರಿಸುವಂತೆ ಹೇಳಿದ ಮಹಿಳೆ ಮೇಲೆಯೇ ಹಲ್ಲೆ ಮಾಡಿದ ಆರೋಪ ಹೊಸಕೊಪ್ಪಲು ಬಡಾವಣೆಯ ಗಾಂಧಿನಗರದಲ್ಲಿ ಕೇಳಿಬಂದಿದೆ.
ಬುಧವಾರ(ಮೇ.3) ರಾತ್ರಿ ಬಿಜೆಪಿ ಅಭ್ಯರ್ಥಿ ಶಾಸಕ ಪ್ರೀತಂಗೌಡ, ಬಿಜೆಪಿ ಮುಖಂಡ ಹಾಗೂ ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್ ಪುತ್ರ ಚೇತನ್ ಮತ್ತು ಸಂಗಡಿಗರು ಪ್ರಚಾರಕ್ಕೆ ತೆರಳಿದ್ದರು.
ಈ ವೇಳೆ ಗೀತಮ್ಮ ಎಂಬ ಮಹಿಳೆ, ನಮ್ಮ ಮನೆ ಬಳಿ ಕಸ ಸಂಗ್ರಹ ವಾಹನ ಬರೋದಿಲ್ಲ, ಬೀದಿ ದೀಪ ಇಲ್ಲ. ನಮ್ಮ ಬೇಡಿಕೆ ಈಡೇರಿಸಿ ಆನಂತರ ಮತ ಹಾಕುತ್ತೆವೆ ಎಂದಿದ್ದಾಳೆ. ಇದೇ ಕಾರಣಕ್ಕೆ ಮಹಿಳೆ ಗೀತಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಪ್ರಶ್ನೆ ಮಾಡಿದ ಮಹಿಳೆ ಮೇಲೆ ಹಲ್ಲೆ ಮಾಡಿ ಮನೆಯ ಗೇಟ್ ಒದ್ದು, ಮನೆ ಮುಂದೆ ಗಲಾಟೆ ಮಾಡೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರಸಭೆ ಅಧ್ಯಕ್ಷನ ಪುತ್ರ ಚೇತನ್ ಮತ್ತು ಸುಪ್ರಿತ್ ಎಂಬುವವರ ವಿರುದ್ಧ ಹಾಸನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚೀನಿಯರು ಪ್ರಪಂಚದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದಾರೆ. ಏಕೆ ಗೊತ್ತ?
ರಾಜವಂಶಸ್ಥನಿಗೆ ಒಲಿದ ಪ್ರಜಾಪ್ರಭುತ್ವದ ಅಧಿಕಾರ
ವಿಧಾನಸೌಧದಲ್ಲಿ, ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್!
ಇಂದಿನಿಂದ ಹೆದ್ದಾರಿ ಟೋಲ್ 5% ಹೆಚ್ಚಳ!
ತಂದೆ ಮಗಳ ಅತ್ಯಂತ ಅದ್ಭುತ ಕಥೆ ಇದು!
ಅರಣ್ಯ ಇಲಾಖೆಯ ಬೋನಿಗೆ ಬಿದ್ದ 4 ವರ್ಷದ ಗಂಡು ಚಿರತೆ.!
ಜೂನ್ 3ರಂದು ನೀವು ಕಂಡರಿಯದ ಅದ್ಭುತ ಆಕಾಶದಲ್ಲಿ!!
ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯ ಬೋಮಿಗೆ ಬಿದ್ದ 4 ವರ್ಷದ ಗಂಡು ಚಿರತೆ.!
ಇಂತಹ ವರ್ತನೆ ಎಷ್ಟು ಜನ ಪೊಲೀಸರಲ್ಲಿದೆ?
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.