ಮನೆ ಸುದ್ದಿ ಜಾಲ ಪ್ರಿಯಾಂಕ್‌ ಖರ್ಗೆ : ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್‌, ‘ಸಸ್ಪೆಂಡ್‌ ಮಾಡಿದ್ದೀವಿ’

ಪ್ರಿಯಾಂಕ್‌ ಖರ್ಗೆ : ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್‌, ‘ಸಸ್ಪೆಂಡ್‌ ಮಾಡಿದ್ದೀವಿ’

0

ಬೆಂಗಳೂರು (ಜೂ.15): ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಬೆಂಗಳೂರಿನ ಪೊಲೀಸರು ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿರುವ ಪ್ರಕರಣ ಇಡೀ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ , ‘ಇದು ಯಾರಿಗೂ ಗೌರವ ತರುವ ವಿಚಾರ ಅಲ್ಲ. ಲಂಚ ಆರೋಪ ಎದುರಿಸುತ್ತಿರುವ ಪೊಲೀಸರನ್ನು ಈಗಾಗಲೇ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ. ‘ರಕ್ಷಕರೇ ಭಕ್ಷಕರಾದರೆ ಸರಿಯಲ್ಲ. ಈ ಪ್ರಕರಣದಲ್ಲಿ ಕೇವಲ ಕೆಳಹಂತದ ಸಿಬ್ಬಂದಿ ಮಾತ್ರ ಇದ್ದಾರೋ ಅಥವಾ ಇಲಾಖೆಯ ಮೇಲಧಿಕಾರಿಗಳು ಭಾಗಿಯಾಗಿದ್ದಾರಾ ಎಂಬ ಬಗ್ಗೆಯೂ ಸಂಪೂರ್ಣ ಪರಿಶೀಲನೆ ನಡೆಸುತ್ತೇವೆ ಎನ್ನಲಾಗಿದೆ.

ಹಾಗೂ ಇಡೀ ವ್ಯವಸ್ಥೆ ತುಕ್ಕು ಹಿಡಿದಿದೆ, ಇದನ್ನು ಸರಿಪಡಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಬೇರು ಮಟ್ಟದಲ್ಲಿ ಎಲ್ಲ ಕಡೆಯೂ ಏನಾದರೂ ಸಮಸ್ಯೆ ಇದ್ದೇ ಇರುತ್ತದೆ. ಆದರೆ, ನಾವು ಬೇರು ಮಟ್ಟದಿಂದಲೇ ವ್ಯವಸ್ಥೆಯನ್ನು ಸರಿಪಡಿಸಿ, ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸುತ್ತೇವೆ” ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ.

ಮತ್ತು ಗೃಹ ಇಲಾಖೆಯನ್ನು ನಿಭಾಯಿಸಲು ಪ್ರಿಯಾಂಕ್ ಖರ್ಗೆ ಅಸಮರ್ಥರು ಎಂಬ ಬಿಜೆಪಿಯ ಟೀಕೆಗೆ ಸಚಿವರು ತೀವ್ರ ಕಿಡಿಕಾರಿದ್ದಾರೆ. “ನಾನು ಯಾವಾಗಲೂ ಜವಾಬ್ದಾರಿ ಮತ್ತು ಹೊಣೆಗಾರಿಕೆ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಆದರೆ ಆರ್. ಅಶೋಕ್, ಆರಗ ಜ್ಞಾನೇಂದ್ರ, ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ರಾಜ್ಯದಲ್ಲಿ ಏನೇನಾಯ್ತೋ ಅದಕ್ಕೆಲ್ಲ ಅವರೇ ಹೊಣೆ ಹೊರುತ್ತಾರಾ? ಅವರ ಅವಧಿಯಲ್ಲಿ ಎಲ್ಲ ಠಾಣೆಗಳನ್ನೂ ಅವರು ಸರಿಯಾಗಿ ನಿಭಾಯಿಸುತ್ತಿದ್ದರಾ? ಆಗ ಲಂಚ ಅನ್ನೋದು ಇರಲೇ ಇಲ್ವಾ? ಆಗಿನ ಆಪಾದನೆಗಳನ್ನು ಸ್ವೀಕರಿಸಲು ಅವರು ರೆಡಿ ಇದ್ದರೆ, ಈಗಿನ ಹೊಣೆಗಾರಿಕೆ ಹೊರಲು ನಾನೂ ರೆಡಿ” ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ‘ಅಶೋಕ್ ಜವಾಬ್ದಾರಿಯಿಂದ ಒಂದೂ ಸಲ ಮಾತಾಡಿಲ್ಲ. ಅವರ ಶಿರಹಟ್ಟಿ ಶಾಸಕ ಲಂಚ ತಗೊಂಡು ಟ್ರ್ಯಾಪ್ ಆದರಲ್ಲ, ಅದನ್ನು ಅಶೋಕ್ ಒಪ್ಪಿಕೊಂಡರಾ? ಬೇಜವಾಬ್ದಾರಿ ಹೇಳಿಕೆ ಕೊಡೋಕೆ ಮಾತ್ರ ವಿಪಕ್ಷ ನಾಯಕರು ಇರುವುದಲ್ಲ’ ಎಂದಿದ್ದಾರೆ ಎನ್ನಲಾಗಿದೆ.