ಮನೆ ಸಾಹಿತ್ಯ ವಿವಿಗಳಲ್ಲಿ ಶುದ್ದ ಸಾಹಿತ್ಯದ ಪಾಠ ಕಡಿಮೆಯಾಗಿದೆ: ಪ್ರೊ. ಎಸ್‌.ಎಲ್‌. ಭೈರಪ್ಪ

ವಿವಿಗಳಲ್ಲಿ ಶುದ್ದ ಸಾಹಿತ್ಯದ ಪಾಠ ಕಡಿಮೆಯಾಗಿದೆ: ಪ್ರೊ. ಎಸ್‌.ಎಲ್‌. ಭೈರಪ್ಪ

0

ಹಾಸನ(Hassan): ವಿಶ್ವವಿದ್ಯಾಲಯಗಳಲ್ಲಿ ಶುದ್ಧ ಸಾಹಿತ್ಯದ ಪಾಠ ಕಡಿಮೆಯಾಗಿದೆ. ಒಂದಲ್ಲ ಒಂದು ದಿನ ನಾವು ಶುದ್ಧ ಸಾಹಿತ್ಯದ ಕಡೆಗೆ ವಾಲಲೇಬೇಕು ಎಂದು ಸಾಹಿತಿ ಪ್ರೊ. ಎಸ್‌.ಎಲ್‌. ಭೈರಪ್ಪ ವಿಷಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಹೊಯ್ಸಳ ಸಾಹಿತ್ಯೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೋಧಕರು ಒಂದೊಂದು ವಾದಕ್ಕೆ ಅಂಟಿಕೊಂಡಿದ್ದು, ನಿಜವಾದ ಸಾಹಿತ್ಯದ ತತ್ವ ಹೇಳುತ್ತಿಲ್ಲ.  ಸಾಹಿತ್ಯ ಓದುವ ಜನರಿಗೆ ನಿಜ ಸಾಹಿತ್ಯ ಯಾವುದು ಎನ್ನುವುದು ಗೊತ್ತಿದೆ. ಅವರನ್ನು ಅಡ್ಡದಾರಿಗೆ ಎಳೆಯುವುದು ಬಹಳ ಕಷ್ಟ. ಬೇರೆ ಬೇರೆ ತಿಳಿದಿರುವ ಓದುಗರು ಇರುವುದು ಒಳ್ಳೆಯದು. ಇದರಿಂದ ಸಾಹಿತ್ಯ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು.

ಜಿಜ್ಞಾಸೆ ಮತ್ತು ಜೀವನ ಮೌಲ್ಯದ ಅನುಭವ ಆಗುವುದು ಸಾಹಿತ್ಯದಿಂದ ಮಾತ್ರ. ಯಾವ ಸಾಹಿತ್ಯ ಕೃತಿ ಜಿಜ್ಞಾಸೆ, ಮೌಲ್ಯಗಳ ಜ್ಞಾನ ತಂದುಕೊಡುವುದಿಲ್ಲವೋ ಅದು ಹೆಚ್ಚು ದಿನ ಬಾಳುವುದಿಲ್ಲ ಎಂದರು.

ಆಧುನಿಕ ಸಾಹಿತ್ಯದ ಅನೇಕ ಕವಿಗಳು ಹೊಸ ಮೌಲ್ಯ ಹುಡುಕಲು ಪ್ರಯತ್ನಿಸಿದರು. ನಮ್ಮ ಪರಂಪರೆಯಲ್ಲಿ ಸಾಹಿತ್ಯದ ಕೆಲಸ ಏನೆಂದರೆ ಮೌಲ್ಯಗಳನ್ನು ಜನರಿಗೆ ತಿಳಿಸುವುದು. ಆದರೆ ಸಾಹಿತ್ಯದ ಮೂಲಕವೇ ಎಲ್ಲವನ್ನೂ ಮಾಡುತ್ತೇವೆ, ಬಡತನ ಹೋಗಲಾಡಿಸುತ್ತೇವೆ, ಆರ್ಥಿಕತೆ ಸುಧಾರಿಸುತ್ತೇವೆ ಎಂಬ ವಾದವೆಲ್ಲ ಅಡ್ಡದಾರಿ ಅನ್ನಿಸುತ್ತದೆ ಎಂದು ವ್ಯಾಖ್ಯಾನಿಸಿದರು.

ಹಿಂದಿನ ಲೇಖನನೀವೂ ಅಪ್ಪ- ಅಮ್ಮ ತೋರಿಸಿದವರನ್ನು ಮದುವೆಯಾಗುತ್ತಿದ್ದೀರಾ ಹಾಗಾದ್ರೆ ಇದನ್ನು ತಿಳಿಯಿರಿ
ಮುಂದಿನ ಲೇಖನರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಸಚಿವ ಸುನೀಲ್ ಕುಮಾರ್