ಮನೆ ರಾಜ್ಯ ನಾಟಕದ ಅರಿವೇ ಇಲ್ಲದವರಿಗೆ ರಾಜ್ಯೋತ್ಸವ ಪ್ರಶಸ್ತಿ: ಹಿರಿಯ ನಾಟಕ ಕಲಾವಿದ ಆರೋಪ

ನಾಟಕದ ಅರಿವೇ ಇಲ್ಲದವರಿಗೆ ರಾಜ್ಯೋತ್ಸವ ಪ್ರಶಸ್ತಿ: ಹಿರಿಯ ನಾಟಕ ಕಲಾವಿದ ಆರೋಪ

0

ಧಾರವಾಡ(Dharawad): ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದೆ ತಾರತಮ್ಯ ಮಾಡಲಾಗಿದೆ. ನಾಟಕದ ಅರಿವೇ ಇಲ್ಲದವರಿಗೆ ನೀಡಿ ನನಗೆ ಮೋಸ ಮಾಡಲಾಗಿದೆ ಎಂದು ಹಿರಿಯ ನಾಟಕ ಕಲಾವಿದ ಸದಾಶಿವನಗೌಡ ಜನಗೌಡರ ಅಳಲು ತೋಡಿಕೊಂಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಹಿನ್ನೆಲೆ ರಾಜ್ಯೋತ್ಸವ ಪ್ರಶಸ್ತಿ ವಂಚಿತರಾದ ಸದಾಶಿವನಗೌಡ ಜನಗೌಡರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.

ನನಗೆ ಅನ್ಯಾಯ ಆಗಿದೆ. ಶ್ರೀಶೈಲ ಹುದ್ದಾರ ಎನ್ನುವ ಕಲಾವಿದ ಸಿಎಂ ಬೊಮ್ಮಾಯಿ ಅವರ ಕ್ಷೇತ್ರದವರಾಗಿದ್ದು, ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಂಗಭೂಮಿಗೆ ನೀಡುವ ಪ್ರಶಸ್ತಿಯಲ್ಲಿ ಅನ್ಯಾಯ ಆಗಿದೆ ಎಂದು ಆರೋಪಿಸಿದ್ದಾರೆ.

ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡುತ್ತೇವೆ ಎಂದು ಹೇಳುತ್ತಾರೆ. ಅವರಿಗೆ ಒಂದೇ ಒಂದು ನಾಟಕದ ಡೈಲಾಗ್ ಹೇಳಾಕ್​ ಬರುವುದಿಲ್ಲಾ ಎಂದು ಹಿರಿಯ ಕಲಾವಿದ ಸದಾಶಿವನಗೌಡ ಆರೋಪಿಸಿದ್ದಾರೆ.

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಕಲಾವಿದ ಸದಾಶಿವನಗೌಡ ಅರ್ಜಿ ಹಾಕಿದ್ದರು. ಶ್ರೀಶೈಲ್ ಹುದ್ದಾರ ಎಂಬುವವರು ಸಿಎಂ ತವರು ಜಿಲ್ಲೆಯವರು ಎನ್ನುವ ಕಾರಣಕ್ಕೆ ಅವರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲೆಗೆ ನಾಲ್ಕು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಒಂದು ಸಂಗೀತ, ಒಂದು ಜಾನಪದ ಕ್ಷೇತ್ರಕ್ಕೆ, ಒಂದು ಬಯಲಾಟ ಇನ್ನೊಂದು ಕ್ರೀಡಾ ಕ್ಷೇತ್ರಕ್ಕೆ ನೀಡಲಾಗಿದೆ.