ಮನೆ ಅಪರಾಧ ಪ್ರಿಯಕರನೊಂದಿಗೆ ಮರು ಮದುವೆಯಾದ ಪತ್ನಿ: ನೇಣಿಗೆ ಶರಣಾದ ಪತಿ

ಪ್ರಿಯಕರನೊಂದಿಗೆ ಮರು ಮದುವೆಯಾದ ಪತ್ನಿ: ನೇಣಿಗೆ ಶರಣಾದ ಪತಿ

0

ಮೈಸೂರು(Mysuru): ಪ್ರಿಯಕರನೊಂದಿಗೆ ಪತ್ನಿ ಮರು ಮದುವೆಯಾದ ವಿಷಯ ತಿಳಿದ ಮೊದಲ ಪತಿ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕಿನ ಕೊಯಮತ್ತೂರು ಕಾಲೊನಿಯಲ್ಲಿ ನಡೆದಿದೆ.

ಸುರೇಶ್ ಕುಮಾರ್(37) ಮೃತ ದುರ್ದೈವಿ.

ಕೊಯಮತ್ತೂರು ಕಾಲೊನಿ ಗ್ರಾಮದ ಸುರೇಶ್​ಕುಮಾರ್​ಗೆ ನೇತ್ರಾ ಎಂಬಾಕೆಯ ಜೊತೆಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಸುರೇಶ್ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ನೇತ್ರಾ ಹುಣಸೂರಿನ ಮಾರೀಷ್ ಸ್ಪಿನ್ನರ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು.

ನೇತ್ರಾ ಕಳೆದ ತಿಂಗಳಿಂದ ನಾಪತ್ತೆಯಾಗಿದ್ದರು. ಕೆಲಸಕ್ಕೆ ಎಂದು ಫ್ಯಾಕ್ಟರಿಗೆ ಹೋದವರು ಮತ್ತೆ ವಾಪಸ್ ಆಗಿರಲಿಲ್ಲ. ಇತ್ತ ಪತಿ ಸುರೇಶ್​ಕುಮಾರ್ ಎಲ್ಲೆಡೆ ಹುಡುಕಾಡಿ, ಆಕೆಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ತಿಂಗಳ ಬಳಿಕ ನೇತ್ರಾಳನ್ನು ಶಿವಮೊಗ್ಗದಲ್ಲಿ ಪತ್ತೆಹಚ್ಚಿದ್ದರು. ಈ ವೇಳೆ, ನೇತ್ರಾ, ಪತಿ ಸುರೇಶ್​ಕುಮಾರ್​ ಜೊತೆಗೆ ಬದುಕಲು ಇಷ್ಟವಿಲ್ಲ. ಅವರು ನನ್ನೊಂದಿಗೆ ಹೊಂದಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ, ಆಘಾತಕಾರಿ ಎಂಬಂತೆ ತಾನು ಇನ್ನೊಬ್ಬರ ಜೊತೆ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾಳೆ.

ಪಕ್ಕದ ಗ್ರಾಮ ಉದ್ದೂರಿನ ಪ್ರಿಯಕರನೊಂದಿಗೆ ಶಿವಮೊಗ್ಗಕ್ಕೆ ತೆರಳಿ 15 ದಿನಗಳ ಹಿಂದೆ ಸೊರಬ ತಾಲೂಕಿನ ಹೊಳೆ ಜೋಳದ ಗುಡ್ಡಗ್ರಾಮದ ಗೋಮಂತೇಶ್ವರ ದೇವಸ್ಥಾನದಲ್ಲಿ ಇಬ್ಬರು ವಿವಾಹ ಮಾಡಿಕೊಂಡಿದ್ದರು. ಪ್ರಿಯಕರನೊಂದಿಗೆ ಮದುವೆಯಾಗಿರುವ ಫೋಟೋವನ್ನು ನೇತ್ರಾ ತನ್ನ ಗಂಡನಿಗೆ ಕಳುಹಿಸಿದ್ದಳು.

ಇದನ್ನು ನೋಡಿದ ಸುರೇಶ್​ಕುಮಾರ್​ ಮನನೊಂದು ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸುರೇಶ್ ಅವರ ತಂದೆ ಕೃಷ್ಣಗೌಡರು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗನ ಸಾವಿಗೆ ಸೊಸೆ ನೇತ್ರಾ ನೇರ ಕಾರಣ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಹಿಂದಿನ ಲೇಖನನಾಟಕದ ಅರಿವೇ ಇಲ್ಲದವರಿಗೆ ರಾಜ್ಯೋತ್ಸವ ಪ್ರಶಸ್ತಿ: ಹಿರಿಯ ನಾಟಕ ಕಲಾವಿದ ಆರೋಪ
ಮುಂದಿನ ಲೇಖನಪತ್ರಕರ್ತರಿಗೆ ಗಿಫ್ಟ್ ವಿಚಾರ: ಹಣದ ಮೂಲ ಪತ್ತೆಯಾಗಬೇಕು ಎಂದ ಮಾಜಿ ಸಿಎಂ ಸಿದ್ದರಾಮಯ್ಯ