ಮನೆ ಸುದ್ದಿ ಜಾಲ ಪಾಲಿಕೆ ಅನುದಾನದಲ್ಲೇ ಪಾರಂಪರಿಕ ಕಟ್ಟಡಗಳ ದುರಸ್ತಿ ಕಾರ್ಯ: ಮೇಯರ್ ಶಿವಕುಮಾರ್

ಪಾಲಿಕೆ ಅನುದಾನದಲ್ಲೇ ಪಾರಂಪರಿಕ ಕಟ್ಟಡಗಳ ದುರಸ್ತಿ ಕಾರ್ಯ: ಮೇಯರ್ ಶಿವಕುಮಾರ್

0

ಮೈಸೂರು(Mysuru): ಮೈಸೂರು ಮಹಾನಗರ ಪಾಲಿಕೆ ಅನುದಾನದಲ್ಲಿಯೇ ನಗರದ ಪಾರಂಪರಿಕ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಂಡಿರುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತು ಪುರಾತತ್ವ ಇಲಾಖೆ ತಜ್ಞರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮೇಯರ್ ಶಿವಕುಮಾರ್ ಸಭೆ ನಡೆಸಿ ಚರ್ಚಿಸಿದರು.  ಸಭೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಿರ್ಧಾರ ಮಾಡಲಾಯಿತು.

ಕೆ.ಆರ್ ಮಾರುಕಟ್ಟೆ, ದೊಡ್ಡಗಡಿಯಾರ, ಪಾಲಿಕೆ ಕಟ್ಟಡ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಕುರಿತು ಮಾತನಾಡಿರುವ ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಸಭೆ ಕರೆದು ಎಲ್ಲರ ಅನುಮೋದನೆ ಪಡೆದು ಪಾಲಿಕೆ ಅನುದಾನದಲ್ಲೇ ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಊಟಿ: ಜನವಸತಿ ಪ್ರದೇಶದ ಬಳಿಯೇ ಹಸು ಕೊಂದ ಹುಲಿ
ಮುಂದಿನ ಲೇಖನನೀರಿನಲ್ಲಿ ನೆನೆಸಿಟ್ಟ ಖರ್ಜೂರ ತಿನ್ನುವುದರಿಂದ ಹಲವು ಪ್ರಯೋಜನ