ನಮ್ಮ ಆರೋಗ್ಯಕ್ಕೆ ಒಣ ಹಣ್ಣುಗಳು ಬಹಳ ಒಳ್ಳೆಯದು. ಪ್ರತಿ ದಿನ ತಿಂದರೂ ಯಾವುದೇ ಅಡ್ಡಪರಿಣಾಗಳಿರುವುದಿಲ್ಲ. ಅಂತಹ ಹಣ್ಣುಗಳಲ್ಲಿ ಖರ್ಜೂರ ಕೂಡ ಒಂದು. ಸಾಕಷ್ಟು ಪೋಷಕಾಂಶವನ್ನು ಹೊಂದಿರುವ ಖರ್ಜೂರ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಆರೋಗ್ಯವನ್ನು ಕಾಪಾಡುತ್ತದೆ.
ಅದರಲ್ಲೂ ಮುಖ್ಯವಾಗಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡುವುದರಿಂದ ಇನ್ನಷ್ಟು ಲಾಭಗಳನ್ನು ಪಡೆಯಬಹುದಾಗಿದೆ.
ನೆನೆಸಿದ ಖರ್ಜೂರ
ಖರ್ಜೂರವನ್ನು ನೀರಿನಲ್ಲಿ ನೆನೆಸುವುದರಿಂದ ಅದರಲ್ಲಿರುವ ಇರುವ ಟ್ಯಾನಿನ್’ಗಳು/ಫೈಟಿಕ್ ಆಮ್ಲವನ್ನು ತೆಗೆದುಹಾಕುತ್ತದೆ. ಆಗ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ನೀರಿನಲ್ಲಿ ನೆನೆದಾಗ ಆರಾಮದಲ್ಲಿ ಜೀರ್ಣವೂ ಆಗುತ್ತದೆ.
ಆದ್ದರಿಂದ ನೀವು ಖರ್ಜೂರವನ್ನು ಸವಿಯಲು ಮತ್ತು ಅವುಗಳಿಂದ ಪೌಷ್ಟಿಕಾಂಶವನ್ನು ಬಯಸಿದರೆ, ಅವುಗಳನ್ನು ತಿನ್ನುವ ಮೊದಲು ರಾತ್ರಿಯಿಡೀ ಅಂದರೆ 8-10 ಗಂಟೆಗಳ ಕಾಲ ನೆನೆಸಿಡಿ.
ಯಾವ ಸಮಯದಲ್ಲಿ ತಿಂದರೆ ಒಳ್ಳೆಯದು?
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು
• ಮಧ್ಯಾಹ್ನದ ನಂತರ ಅಥವಾ ಊಟಕ್ಕೂ 2 ಗಂಠೆ ಮೊದಲು ಸ್ನ್ಯಾಕ್ಸ್ ರೀತಿಯಲ್ಲಿ ಸೇವನೆ ಮಾಡಬಹುದು.
• ಕೆಲವರಿಗೆ ಆಗಾಗ ಸಿಹಿ ತಿನ್ನಬೇಕು ಎನ್ನಿಸುತ್ತದೆ. ಆಗಲೂ ನೆನೆಸಿದ ಖರ್ಜೂರವನ್ನು ಸೇವನೆ ಮಾಡಬಹುದು.
• ಮಲಗುವ ಸಮಯದಲ್ಲಿ ತುಪ್ಪದೊಂದಿಗೆ ಖರ್ಜೂರ ಸೇವನೆ ಮಾಡಿದರೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
ಎಷ್ಟು ಪ್ರಮಾಣದಲ್ಲಿ ತಿನ್ನಬೇಕು?
• ಒಂದು ಬಾರಿಗೆ 2 ಖರ್ಜೂರವನ್ನು ತಿನ್ನಬಹುದು. ದಿನಕ್ಕೆ 4 ಬಾರಿಯಾದರೂ ಸೇವನೆ ಮಾಡಬಹುದು.
• ನಿಮ್ಮ ತೂಕವನ್ನು ಹೆಚ್ಚಿಸಲು ನೀವು ಬಯಸಿದರೆ, ನಂತರ ನೀವು ದಿನಕ್ಕೆ 4 ಸೇವಿಸಬಹುದು. ಆದರೆ ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿದ್ದಾಗ ಮಾತ್ರ ನಾಲ್ಕೈದು ಬಾರಿ ತಿನ್ನಬಹುದು.
• ನೆನೆಸಿದ ಖರ್ಜೂರವನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
• ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಉತ್ತಮವಾಗಿಸಲು ಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
• ಅಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಫಲವತ್ತತೆಯನ್ನು ಉತ್ತಮವಾಗಿಸಿ ಆರೋಗ್ಯಕರ ಮಗುವನ್ನು ಪಡೆಯಲು ಮಹಿಳೆ ಮತ್ತು ಪುರುಷರಿಬ್ಬರಿಗೂ ಒಳ್ಳೆಯದು.
• ರಕ್ತದ ಕೊರತೆ, ಅಶಕ್ತತೆ ಅಥವಾ ವೀಕ್ನೆಸ್ ಹಾಗೂ ಮೂಲವ್ಯಾಧಿಯಂತಹ ಸಮಸ್ಯೆ ನಿವಾರಣೆ ಮಾಡಲೂ ಕೂಡ ನೆನೆಸಿದ ಖರ್ಜೂರ ಸಹಾಯ ಮಾಡುತ್ತದೆ.
ಮಕ್ಕಳಿಗೆ ಖರ್ಜೂರ
ಮಕ್ಕಳ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖರ್ಜೂರ ಅತ್ಯುತ್ತಮವಾಗಿದೆ. ಕಡಿಮೆ ತೂಕ, ಕಡಿಮೆ ಹಿಮೋಗ್ಲೋಬಿನ್ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಮಕ್ಕಳಿಗೆ ಪ್ರತಿದಿನ ಒಂದು ಸಿಹಿ ಖರ್ಜೂರದ ಹಣ್ಣನ್ನು ನೀಡುವುದು ತುಂಬಾ ಉಪಯುಕ್ತವಾಗಿದೆ. ಇದನ್ನು 2-3 ತಿಂಗಳವರೆಗೆ ಮುಂದುವರೆಸಬಹುದು.
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
ಸುನಿತಾ ಜೊತೆ ಗಗನಕ್ಕೇರಿದ ಭಗವದ್ಗೀತೆ, ಗಣೇಶ ಮೂರ್ತಿ..!
ಮೈಸೂರಿನ ಹೆಬ್ಬಾಳ್ ಕೆರೆಯಲ್ಲಿ ಮೀನುಗಳ ಮಾರಣಹೋಮ….
ಸುಳ್ಳು ಮಾಹಿತಿಯನ್ನ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ..
ಹನುಮ ಕೇಸರಿಯಾದ ಕಥೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.