ಮನೆ ಅಪರಾಧ ಶ್ರೀರಂಗಪಟ್ಟಣ ಬಳಿ ರೌಡಿಶೀಟರ್ ಹತ್ಯೆ

ಶ್ರೀರಂಗಪಟ್ಟಣ ಬಳಿ ರೌಡಿಶೀಟರ್ ಹತ್ಯೆ

0

ಶ್ರೀರಂಗಪಟ್ಟಣ: ರೌಡಿಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಪಾಲಹಳ್ಳಿ ನಿವಾಸಿ ವಿನೋದ್ ಅಲಿಯಾಸ್ ಕುಂಟ ವಿನು (32) ಕೊಲೆಯಾದ ರೌಡಿ ಶೀಟರ್.

ಈತ ಸೋಮವಾರ ಮುಂಜಾನೆ ತನ್ನ ಫಾರ್ಮ್ ಹೌಸ್ ಗೆ ಸ್ಕೂಟರಲ್ಲಿ ತೆರಳುತ್ತಿದ್ದ ವೇಳೆ ಮಾರುತಿ ಓಮ್ನಿಯಲ್ಲಿ ಬಂದು ನಾಲ್ವರು ದುಷ್ಕರ್ಮಿಗಳು ಮೊದಲು ಸ್ಕೂಟರ್ ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕಾರಿನಿಂದ ಇಳಿದು ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಕೊಂಡು ಪರಾರಿಯಾಗಿರುವ ಹಂತಕರಿಗಾಗಿ ಶೋಧನ ಕಾರ್ಯ ಕೈಗೊಂಡಿದ್ದಾರೆ.

ಹಿಂದಿನ ಲೇಖನಮಂಡ್ಯ: ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ
ಮುಂದಿನ ಲೇಖನಹಲಗೂರು:  ಏಳು ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು