ಮನೆ ರಾಜ್ಯ ಅಸ್ತಿತ್ವ ತೋರಿಸಲು ಸಿದ್ಧರಾಮೋತ್ಸವ: ನಳಿನ್ ಕುಮಾರ್ ಕಟೀಲ್ ಟೀಕೆ

ಅಸ್ತಿತ್ವ ತೋರಿಸಲು ಸಿದ್ಧರಾಮೋತ್ಸವ: ನಳಿನ್ ಕುಮಾರ್ ಕಟೀಲ್ ಟೀಕೆ

0

ಹಾಸನ(Hassan): ಅಸ್ತಿತ್ವ ತೋರಿಸಲು ಸಿದ್ದರಾಮೋತ್ಸವ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ದುಃಖಕ್ಕೆ ತೇಪೆ ಹಾಕಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಸಿದ್ಧರಾಮಯ್ಯ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಸಿದ್ಧರಾಮೋತ್ಸವದ ಕುರಿತು ಹಾಸನದಲ್ಲಿ ಮಾತನಾಡಿರುವ ನಳಿನ್ ಕುಮಾರ್ ಕಟೀಲ್, ಮುಂದೆ ಕಾಂಗ್ರೆಸ್ ಎರಡು ಹೋಳಾಗಲಿದೆ. ಬಿಜೆಪಿ ದ್ವೇಷದ ರಾಜಕಾರಣ ಮಾಡಲ್ಲ. ಲೋಕಾಯುಕ್ತ ಹಲ್ಲು ಕಿತ್ತಿದ್ದು ಸಿದ್ಧರಾಮಯ್ಯ ಎಂದು ಕಿಡಿಕಾರಿದರು.
ಇನ್ನು ಕಾಂಗ್ರೆಸ್ ಗೆ ಹೆಚ್ಚಿನ ಸೀಟು ಎಂಬ ಸಮೀಕ್ಷೆ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಗುಂಪಿಗೆ ಎಷ್ಟು ಸೀಟು ಡಿಕೆ ಶಿವಕುಮಾರ್ ಗುಂಪಿಗೆ ಎಷ್ಟು ಸೀಟು ಅಂತಾ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ನಡುವಿನ ಒಳಜಗಳ ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು.

ಹಿಂದಿನ ಲೇಖನನಿಮ್ಮ ‘ಕೊನೆ’ ಚುನಾವಣೆಯಲ್ಲಿ ಸೋಲು ಶತಸಿದ್ಧ: ಸಿದ್ಧರಾಮಯ್ಯಗೆ ಕುಟುಕಿದ ಬಿಜೆಪಿ
ಮುಂದಿನ ಲೇಖನಉಕ್ಕಿ ಹರಿಯುತ್ತಿರುವ ಕಾವೇರಿ ನದಿಯ ಮಧ್ಯೆ ಸಿಲುಕಿದ ದೋಣಿ: ರಕ್ಷಣೆ