ಮನೆ ಕಾನೂನು ಬಿಇಓ ಕಚೇರಿಯ ಎಸ್‌ ಡಿಎ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಬಿಇಓ ಕಚೇರಿಯ ಎಸ್‌ ಡಿಎ ಸಿಬ್ಬಂದಿ ಲೋಕಾಯುಕ್ತ ಬಲೆಗೆ

0

ಪಾಂಡವಪುರ: ಪಿಂಚಣಿ ಹಣ ಪಡೆಯಲು ದಾಖಲೆ ಒದಗಿಸಲು ನಿವೃತ್ತ ಶಿಕ್ಷಕರೊಬ್ಬರ ಬಳಿ ಕಚೇರಿಯಲ್ಲಿಯೇ ೧೨ ಸಾವಿರ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಬಿಇಓ ಕಚೇರಿಯ ಎಸ್‌ ಡಿಎ ಸಿಬ್ಬಂದಿ ವೆಂಕಟೇಶ್ ಎಂಬುವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ.

ಚಿನಕುರಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದ ಶಿಕ್ಷಕ ಸುರೇಶ್‌ ಬಾಬು ಎಂಬುವರ ಬಳಿ ನಿವೃತ್ತಿಯ ಪಿಂಚಣಿ ಹಣ ಪಡೆಯುವುದಕ್ಕಾಗಿ ದಾಖಲೆಗಳನ್ನು ಒದಗಿಸಿಕೊಡುವುದಕ್ಕಾಗಿ ಬಿಇಓ ಕಚೇರಿಯ ಎಸ್‌ ಡಿಎ ಸಿಬ್ಬಂದಿ ವೆಂಕಟೇಶ್ ಎಂಬುವರು ೧೨ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ನಿವೃತ್ತ ಶಿಕ್ಷಕ ಸುರೇಶ್‌ಬಾಬು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.

ಶುಕ್ರವಾರ ಮಧ್ಯಾಹ್ನ ಬಿಇಓ ಕಚೇರಿಯಲ್ಲಿ ಎಸ್‌ ಡಿಎ ಸಿಬ್ಬಂದಿ ವೆಂಕಟೇಶ್ ಅವರು ಸುರೇಶ್‌ ಬಾಬು ಅವರ ಬಳಿ ಲಂಚಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ.

ಎಸ್‌ ಡಿಎ ಸಿಬ್ಬಂದಿ ವೆಂಕಟೇಶ್ ಅವರು ಈ ಹಿಂದೆಯೂ ಸಹ ಬೇರೊಬ್ಬ ಶಿಕ್ಷಕರಿಂದ ಸಹ ೩೩ ಸಾವಿರ ಲಂಚದ ಹಣವನ್ನು ಆನ್‌ ಲೈನ್ ಮೂಲಕ ಪಡೆದಿರುವುದು ಸಹ ಲೋಕಾಯುಕ್ತ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಪರಿಶೋಧನೆ ನಡೆಸಿದರು.

ಬಳಿಕ ಆರೋಪಿ ವೆಂಕಟೇಶ್‌ ನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ, ಪರಿಶೋಧನೆಯ ಬಳಿಕ ಕಾನೂನಿನ ಪ್ರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಡಿವೈಎಸ್‌ ಪಿ ಸುನೀಲ್‌ ಕುಮಾರ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

ಹಿಂದಿನ ಲೇಖನಯುವನಿಧಿ ಗ್ಯಾರಂಟಿ ಯೋಜನೆ ಜಾರಿ ನಮ್ಮ ಸರ್ಕಾರದ ಹೆಮ್ಮೆಯ ಸಂಗತಿ: ಸಚಿವ ಎಸ್ ಮಧು ಬಂಗಾರಪ್ಪ
ಮುಂದಿನ ಲೇಖನಮೈಸೂರು: ಹುರುಳಿಕಾಳಿನಿಂದ ಸುಟ್ಟು ಕರಕಲಾದ ಕಾರು