ಮನೆ ಕ್ರೀಡೆ ರಾಜ್ಯ ಸಭಾ ಚುನಾವಣೆ: ​ ಹರ್ಭಜನ್ ಸಿಂಗ್ ಆಮ್ ಆದ್ಮಿ ಪಕ್ಷದ ಆಭ್ಯರ್ಥಿ

ರಾಜ್ಯ ಸಭಾ ಚುನಾವಣೆ: ​ ಹರ್ಭಜನ್ ಸಿಂಗ್ ಆಮ್ ಆದ್ಮಿ ಪಕ್ಷದ ಆಭ್ಯರ್ಥಿ

0

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಭಾರತದ ಮಾಜಿ ಕ್ರಿಕೆಟರ್​ ಹರ್ಭಜನ್ ಸಿಂಗ್​ ಅವರನ್ನು ಪಂಜಾಬ್​ನ ಆಮ್​ ಆದ್ಮಿ ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚಿಗೆ ನಡೆದ ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದೆ. ಬುಧವಾರ ಭಗವಂತ್ ಮಾನ್​ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಅಮೋಘ ಗೆಲುವಿನ ಹಿನ್ನೆಲೆಯಲ್ಲಿ ಎಎಪಿ ಪಂಜಾಬ್‌ನಲ್ಲಿ ರಾಜ್ಯಸಭೆಯ 5 ಸ್ಥಾನಗಳನ್ನು ಪಡೆಯಲಿದೆ.ಮೂಲಗಳ ಮಾಹಿತಿ ಪ್ರಕಾರ, ಭಗವಂತ್ ಮಾನ್​ ನೇತೃತ್ವದ ಪಂಜಾಬ್​ನ ನೂತನ ಸರ್ಕಾರ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​​ರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಿದೆ. ಜೊತೆಗೆ, ಸ್ಪೋರ್ಟ್ಸ್​ ಯುನಿವರ್ಸಿಟಿಯ ಮುಖ್ಯಸ್ಥರನ್ನಾಗಿಯೂ ಭಜ್ಜಿಯನ್ನು ನೇಮಕ ಮಾಡುವುದಾಗಿ ತಿಳಿಸಿದೆ.

ಫೆಬ್ರವರಿಯಲ್ಲಿ ನಡೆದ ಪಂಜಾಬ್ ಚುನಾವಣೆಗೂ ಮುನ್ನ ಹರ್ಭಜನ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಮಾಜಿ ಕ್ರಿಕೆಟಿಗ ಈ ವದಂತಿಯನ್ನು ತಳ್ಳಿ ಹಾಕಿದ್ದರು. ನಂತರ ಕಾಂಗ್ರೆಸ್​ ನಾಯಕ ನವಜೋತ್ ಸಿಂಗ್ ಸಿಧು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದ ಫೋಟೋದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್​ ಸೇರಬಹುದು ಎನ್ನಲಾಗಿತ್ತು.

ಇದೀಗ ಆಪ್​ ಪಕ್ಷವೇ ಭಜ್ಜಿಯನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಗಾಳಿಸುದ್ದಿಗಳಿಗೆ ತೆರೆ ಎಳೆದಿದೆ. ಆದರೆ ಇಲ್ಲಿಯವರೆಗೆ ಭಜ್ಜಿ ಯಾವುದೇ ಹೇಳಿಕೆ ನೀಡಿಲ್ಲ.

ಹಿಂದಿನ ಲೇಖನದೇಶದ ರಕ್ಷಣಾ ಪಡೆಗೆ ಅವಶ್ಯಕತೆಗಿಂತ ಕಡಿಮೆ ಹಣ ಬಜೆಟ್ ನಲ್ಲಿ ಮೀಸಲು
ಮುಂದಿನ ಲೇಖನಹೊತ್ತಿ ಉರಿದ ಲಾರಿ: ಚಾಲಕ ಸಜೀವ ದಹನ