ಮನೆ ರಾಜಕೀಯ ಕ್ಷೇತ್ರ ಇಲ್ಲದ ನತದೃಷ್ಟ ನಾಯಕ ಸಿದ್ದರಾಮಯ್ಯ: ನಳೀನ್ ಕುಮಾರ್ ಕಟೀಲ್ ವ್ಯಂಗ್ಯ

ಕ್ಷೇತ್ರ ಇಲ್ಲದ ನತದೃಷ್ಟ ನಾಯಕ ಸಿದ್ದರಾಮಯ್ಯ: ನಳೀನ್ ಕುಮಾರ್ ಕಟೀಲ್ ವ್ಯಂಗ್ಯ

0

ಭಟ್ಕಳ: ಕಾಂಗ್ರೆಸ್‍ ನಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಕ್ಷೇತ್ರ ಇಲ್ಲದಂತಹ ನತದೃಷ್ಟ ನಾಯಕ ಸಿದ್ದರಾಮಯ್ಯ ಆಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜತೆ ಅವರು ಮಾತನಾಡಿದರು.

ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯನವರಿಗೆ ಸ್ಪರ್ಧಿಸಲು ಕ್ಷೇತ್ರ ಇಲ್ಲದಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ಇಂತದ್ದೇ ಸ್ಥಿತಿ ಹಲವು ಕಾಂಗ್ರೆಸ್ ಮುಖಂಡರು ಎದುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಗೆಲ್ಲುವ ಗ್ಯಾರಂಟಿ ಇರದ ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಕಾರ್ಡ್ ನೀಡಿ ಮತಕೇಳುತ್ತಿದೆ ಎಂದು ಟೀಕಿಸಿದರು.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಎದುರು ಕಾಂಗ್ರೆಸಿನ ಪ್ರಜಾಧ್ವನಿ ಹಾಗೂ ಜೆ.ಡಿ.ಎಸ್ ನ ಪಂಚರತ್ನ ಯಾತ್ರೆ ಎರಡು ಮಂಕಾಗಿ ಹೋಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಿಸಲಿದೆ. ಕಾಂಗ್ರೆಸ್ ಕಾಡಿಗೆ ಅಲೆಯುವ ಸ್ಥಿತಿ ನಿರ್ಮಾಣ ಆಗಲಿದೆ ಜನರ ಮನಸ್ಸಿನಿಂದ ಆ ಪಕ್ಷ ಯಾವಾಗಲೋ ದೂರ ಆಗಿದೆ. ಕರಾವಳಿಯಲ್ಲಿ ಈಗಿರುವ ಸ್ಥಾನವನ್ನು ಕಾಂಗ್ರೆಸ್ ಈ ಬಾರಿ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಮುಕ್ತ ಕರಾವಳಿ ನಿರ್ಮಾಣ ಆಗಲಿದೆ’ ಎಂದೂ ಹೇಳಿದರು.

ಹಿಂದಿನ ಲೇಖನಸಿದ್ದರಾಮಯ್ಯ ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ: ಎಂ ಬಿ ಪಾಟೀಲ್
ಮುಂದಿನ ಲೇಖನಆರುಣಿ ಉದ್ಧಾಲಕ