ಮನೆ ರಾಜ್ಯ ಸಿದ್ದರಾಮಯ್ಯ- ವಿ.ಶ್ರೀನಿವಾಸ ಪ್ರಸಾದ್ ಮುಖಾಮುಖಿ

ಸಿದ್ದರಾಮಯ್ಯ- ವಿ.ಶ್ರೀನಿವಾಸ ಪ್ರಸಾದ್ ಮುಖಾಮುಖಿ

0

ಬೆಂಗಳೂರು(Bengaluru): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಂಸದ ವಿ. ಶ್ರೀನಿವಾಸ ಪ್ರಸಾದ್ ದೀರ್ಘಕಾಲದ ಬಳಿಕ ವಿಧಾನಸೌಧದಲ್ಲಿ ಪರಸ್ಪರ ಮುಖಾಮುಖಿಯಾದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಸೋಮವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಮತದಾನ ಮಾಡಿ ಹಿಂತಿರುಗುತ್ತಿದ್ದ ಸಂಸದ ವಿ. ಶ್ರೀನಿವಾಸ ಅವರಿಗೆ ಮತಗಟ್ಟೆಯತ್ತ ಹೊರಟಿದ್ದ ಸಿದ್ದರಾಮಯ್ಯ ಮುಖಾಮುಖಿಯಾರದರು

ಇಬ್ಬರೂ ವಿಧನಾಸೌಧದ ಮೊದಲನೇ ಮಹಡಿಯ ಮೊಗಸಾಲೆಯಲ್ಲಿ ಮುಖಾಮುಖಿಯಾದರು. ನಗುತ್ತಾ ಹಸ್ತಲಾಘವ ಮಾಡಿಕೊಂಡರು. ಕೆಲಕಾಲ ಮಾತುಕತೆ ನಡೆಸಿದ ನಾಯಕರು ಅಲ್ಲಿಂದ ನಿರ್ಗಮಿಸಿದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಪ್ರಸಾದ್ ಅವರನ್ನು ಸಂಪುಟ ಪುನರ್‌ರಚನೆ ವೇಳೆ ಕೈಬಿಡಲಾಗಿತ್ತು.

ಆ ಬಳಿಕ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಅವರು, ತೀವ್ರ ವಾಗ್ದಾಳಿಗೆ ಇಳಿದಿದ್ದರು. ನಂತರ ಬಿಜೆಪಿ ಸೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿದ್ದರು.

ಹಿಂದಿನ ಲೇಖನಕಬಿನಿ, ಕೆಆರ್’ಎಸ್ ಜಲಾಶಯ ಭರ್ತಿ: ಜು.20 ರಂದು ಬಾಗೀನ ಅರ್ಪಿಸಲಿರುವ ಸಿಎಂ ಬೊಮ್ಮಾಯಿ
ಮುಂದಿನ ಲೇಖನಸಿರಿಧಾನ್ಯ ಸೇವನೆಯಿಂದ ಗುಣವಾಗದ ಕಾಯಿಲೆಗಳನ್ನು ಗುಣ ಪಡಿಸಬಹುದು!