ಮನೆ ರಾಷ್ಟ್ರೀಯ ಸಿಡಿಲು ಬಡಿದು ಯೋಧ ಸಾವು

ಸಿಡಿಲು ಬಡಿದು ಯೋಧ ಸಾವು

0

ನವದೆಹಲಿ (New Delhi ): ಯೋಧನಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಡೆದಿದೆ.

ರೈಫಲ್‌ಮ್ಯಾನ್ ಲೋಕೇಂದ್ರ ಸಿಂಗ್‌ ಮೃತಪಟ್ಟ ಯೋಧ. ಸಿಂಗ್ ಅವರನ್ನು ಬಾರಾಮುಲ್ಲಾದ ಗುಲ್ಮಾರ್ಗ್ ಸೆಕ್ಟರ್‌ನ ಎಲ್‌ಒಸಿಯ ಫಾರ್ವರ್ಡ್ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ಕರ್ತವ್ಯದಲ್ಲಿದ್ದಾಗ ಜೂನ್ 10ರಂದು ಸಿಡಿಲು ಬಡಿದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹತ್ತಿರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ 11:45ಕ್ಕೆ ಮೃತಪಟ್ಟಿರುವುದಾಗಿ ಶ್ರೀನಗರದ ರಕ್ಷಣಾ ಪಿಆರ್‌ಒ ತಿಳಿಸಿದ್ದಾರೆ.

ಯೋಧನೊಬ್ಬ ಹೀಗೆ ಪ್ರಾಕೃತಿಕ ವಿಕೋಪದಿಂದ ದುರ್ಮರಣ ಹೊಂದಿರುವುದು ದುಃಖದ ಸಂಗತಿಯಾಗಿದೆ.

ಹಿಂದಿನ ಲೇಖನಇಂದಿನ ಹವಾಮಾನ ವರದಿ
ಮುಂದಿನ ಲೇಖನಟಿ 20 ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಂ ಇಂಡಿಯಾ